ಸಿದ್ದರಾಮಯ್ಯಗೆ ಕೋಟಿ ನಮನ ಎಂದ ಸುಧಾಕರ್

ಬುಧವಾರ, 24 ಆಗಸ್ಟ್ 2022 (11:26 IST)
ಚಿಕ್ಕಬಳ್ಳಾಪುರ : ಮಡಿಕೇರಿ ಚಲೋ ರದ್ದು ಮಾಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸಚಿವ ಸುಧಾಕರ್ ಕೋಟಿ-ಕೋಟಿ ನಮನ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಡವಾಗಿ ಆದರೂ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯ ಆಗಿದ್ದಕ್ಕೆ ಕೋಟಿ ನಮನ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಎಲ್ಲರೂ ಸುರಕ್ಷಿತವಾಗಿ ಇರಬೇಕು.

ಕರುನಾಡು ಶಾಂತಿಯುತ ರಾಜ್ಯ, ರಾಜ್ಯದ ಹಿರಿಮೆ ಹೆಚ್ಚು ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ