ಎಸ್ ಪಿ ಮನೆ ಎದುರಲ್ಲೇ ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?

ಶನಿವಾರ, 1 ಡಿಸೆಂಬರ್ 2018 (14:44 IST)
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವಾಸದ ಎದುರಲ್ಲೇ ಪೇದೆಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಕುತೂಹಲ ಮೂಡಿಸಿದೆ.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮನೆ ಮುಂದೆ  ಪೇದೆ ಆತ್ಮ ಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಹೀಗಾಗಿ ತೀವ್ರ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ ಪೊಲೀಸರು.
ಪೇದೆಯ ಸಾವಿನ ಸುತ್ತ ಅನುಮಾನದ ಹುತ್ತ? ಸುಳಿದಾಡುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ ಪಿ ಸಿ.ಬಿ.ರಿಷ್ಯಂತ್ ಅವರಿಂದ ತೀವ್ರ ಪರಿಶೀಲನೆ ನಡೆಸಲಾಗುತ್ತಿದೆ.

ಫಾರೆನ್ ಸಿಕ್  ಎಕ್ಸಪರ್ಟ್ಸ, ಶ್ವಾನದಳದಿಂದ ಎಸ್ಪಿ ಅವರ ಮನೆಯ ಆವರಣ ಸುತ್ತ ತೀವ್ರ ಪರಿಶೀಲನೆ ನಡೆಸಲಾಗಿದೆ.
ಬಾಂಬ್ ಡಿಟೆಕ್ಟರ್ ನಿಂದ ಶೋಧ ಕಾರ್ಯವೂ ನಡೆದಿದೆ.
ಪೇದೆ ಸ್ನೇಹಿತರನ್ನು ಕರೆದು ಎಸ್ ಪಿ ವಿಚಾರಣೆ ನಡೆಸಿದ್ದಾರೆ. ಪೇದೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರಲಿಲ್ಲ ಎಂದು ಆತನ ಸ್ನೇಹಿತರು ಹೇಳುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ