ಯಶ್, ದರ್ಶನ್ ಅಭಿಮಾನಿಗಳದ್ದು ಮತಗಳಾಗಿ ಬರೋ ನಂಬಿಕೆ ಇಲ್ಲ ಎಂದ ಸುಮಲತಾ

ಗುರುವಾರ, 4 ಏಪ್ರಿಲ್ 2019 (20:36 IST)
ನಟ ಯಶ್ ಮತ್ತು ದರ್ಶನ್ ಅವರ ಎಲ್ಲ ಅಭಿಮಾನಿಗಳು ಮತಗಳಾಗಿ ಬರುತ್ತವೆ ಎಂಬ ನಂಬಿಕೆಯಿಲ್ಲ. ಹೀಗಂತ ಸುಮಲತಾ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷೇತರ ಅಭ್ಯರ್ಥಿ ಮಹಿಳೆಯಾಗಿ  ಎದುರಿಸುತ್ತಿದ್ದೇನೆ. ಸರ್ಕಾರದ ವಿರುದ್ಧ ಹೋರಾಡಲು  ಅನಿವಾರ್ಯವಾಗಿ ಪಕ್ಷೇತರರಾಗಿ ನಿಂತರೆ ಎಲ್ಲಾ ಪಕ್ಷಗಳಿಂದ ಸಹಕಾರ ಸಿಗಲಿದೆ ಎಂಬ ಸಂದೇಶ ಬಂತು. ಯಾವುದೇ ಪಕ್ಷವನ್ನು ಸೇರಬಹುದಿತ್ತು. ಆದರೂ ನಾನು ಈ  ತೀರ್ಮಾನ ಕೈಗೊಂಡೆ. ಜನಾಭಿಪ್ರಾಯಕ್ಕೆ ಬೆಲೆಕೊಟ್ಟು ತೀರ್ಮಾನಕ್ಕೆ ಬಂದೆ ಎಂದರು.

ಬೇಷರತ್ತು ಬೆಂಬಲ ನೀಡಿರುವ ಯಡಿಯೂರಪ್ಪ ಯಾವುದೇ ವಿಚಾರ ಚರ್ಚಿಸಿಲ್ಲ. ನನ್ನ ನಡೆ ಕ್ಷೇತ್ರದ ಜನತೆಯ ತೀರ್ಮಾನದಂತೆ ಇರುತ್ತದೆ ಎಂದರು.

ರಜನಿಕಾಂತ್ ಮತ್ತು ಚಿರಂಜೀವಿ ಅವರನ್ನು ಕರೆದಿಲ್ಲ. ಅಭಿಮಾನಿಗಳನ್ನು ಎಲ್ಲರೂ ಮತವಾಗಿ ಪರಿವರ್ತನೆ ಆಗುತ್ತದೆ ಎನ್ನುವುದಿಲ್ಲ. ಬಿ.ಎಸ್.ಯಡಿಯೂರಪ್ಪ ಅವರಿಗೆ ಚುನಾವಣೆಯಲ್ಲಿ ಪ್ರಚಾರಕ್ಕೆ ಬನ್ನಿ ಎಂದು ನಾನು ಕರೆದಿಲ್ಲ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ