ನ್ಯಾಯ ಹಳ್ಳ ಕಡೆ, ಅನ್ಯಾಯ ಸಂಪತ್ತಿನ ಕಡೆ, ಕಲಿಯುಗದಲ್ಲಿ ಅನ್ಯಾಯವೇ ರಾಜ. ಸತ್ಯವಂತ ಸುಡುಗಾಡಿಗೆ, ಸುಳ್ಳುಗಾರ ಲೋಕಪೂಜಿತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ಜಲಾನಯನದಲ್ಲಿ ರಾಜ್ಯದ ರೈತರಿಗೆ ಕುಡಿಯುವ ನೀರಿಲ್ಲ. ಇಂತಹ ಸಂದರ್ಭಗಳಲ್ಲಿ ತಮಿಳುನಾಡಿಗೆ ಯಾವ ರೀತಿ ನೀರು ಬಿಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಯಾವುದೇ ಕಾರಣಕ್ಕೂ ಸುಪ್ರೀಂಕೋರ್ಟ್ ತೀರ್ಪು ಪಾಲಿಸಬಾರದು ಎಂದು ನವರಸ ನಾಯಕ ನಟ ಜಗ್ಗೇಶ್ ಕರೆ ನೀಡಿದ್ದಾರೆ.