ಅಮಾನತುಗೊಂಡಿದ್ದ ಪಿಡಿಓ ರವಿ ಆತ್ಮಹತ್ಯೆ

ಶನಿವಾರ, 30 ಏಪ್ರಿಲ್ 2022 (20:07 IST)
ಅಮಾನತುಗೊಂಡಿದ್ದ ಪಿಡಿಓ ರವಿ ಆತ್ಮಹತ್ಯೆ ಮಾಡಿಕೊಂಡ ಕೊಂಡ ಘಟನೆ ರಾಮನಗರದ ಹಾರೋಹಳ್ಳಿಯ ಕೊಳ್ಳಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೈರಮಂಗಲ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿ. ಅಕ್ರಮ ಈ ಖಾತೆ ಆರೋಪದ ಮೇರೆಗೆ ರವಿ ಅಮಾನತುಗೊಂಡಿದ್ದರು. ಕಳೆದ ವಾರ ಪಿಡಿಓ ರವಿ ಅವರನ್ನು ಜಿ.ಪಂ. ಸಿಇಒ ಇಕ್ರಂ ಅಮಾನತು ಮಾಡಿದ್ದರು. ಅಕ್ರಮ ಈ ಖಾತೆ ಬಗ್ಗೆ ಈ ಹಿಂದೆ ಯಲಹಂಕ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಈ ಖಾತೆ ಬೆಳಕಿಗೆ ಬರುವ ಹಿನ್ನೆಲೆ‌ ರವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ