ಕುತ್ತಿಗೆಗೆ ಚೂರಿ ಇರಿತ ಕೇಸ್ : ದುಬೈನಿಂದ ಮೈಸೂರಿಗೆ ಬಂದ ಶಾಸಕ ತನ್ವೀರ್ ಸೇಠ್

ಬುಧವಾರ, 8 ಜನವರಿ 2020 (18:45 IST)

ಚೂರಿ ಇರಿತ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಾಸಕ ತನ್ವೀರ್ ಸೇಠ್ ಸದ್ಯ ಆರೋಗ್ಯವಾಗಿದ್ದಾರೆ.


ಕಳೆದೆರಡು ತಿಂಗಳ ಹಿಂದೆ ಸಮಾರಂಭವೊಂದರಲ್ಲಿ ದುಷ್ಕರ್ಮಿಯೊಬ್ಬ ಚೂರಿಯಿಂದ ಶಾಸಕರ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗಿದ್ದನು.
ಚಿಕಿತ್ಸೆ ಪಡೆದು ದುಬೈಗೆ ತೆರಳಿ ಹೆಚ್ಚಿನ ತಪಾಸಣೆ, ಚಿಕಿತ್ಸೆಗೆ ಒಳಗಾಗಿದ್ದ ತನ್ವೀರ್ ಸೇಠ್, ವಿಶ್ರಾಂತಿ ಪಡೆದು ಗುಣಮುಖರಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ಶಾಸಕ ತನ್ವೀರ್ ಸೇಠ್, ಇದೀಗ ಚಿಕಿತ್ಸೆ ಪೂರ್ಣವಾಗಿ ಪಡೆದುಕೊಂಡು ಮೈಸೂರು ನಿವಾಸಕ್ಕೆ ಮರಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ