ಪಾರ್ಟಿ ಮಾಡುವ ನೆಪದಲ್ಲಿ ರೌಡಿ ಶೀಟರ್ ನ ಕೊಂದ ಪ್ರಕರಣ: ಐವರು ಆರೋಪಿಗಳು ಅಂದರ್

ಸೋಮವಾರ, 17 ಡಿಸೆಂಬರ್ 2018 (19:05 IST)
ಮೈಲಸಂದ್ರದ ರೌಡಿಶೀಟರ್ ನಾಗರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

ಬನ್ನೇರುಘಟ್ಟ ‌ಪೊಲೀಸರಿಂದ ಐವರು ಆರೋಪಿಗಳ ಬಂಧನವಾಗಿದೆ. ಆದರ್ಶ, ಕಾರ್ತಿಕ್, ಸುನೀಲ್, ನಂಜಪ್ಪ ಹಾಗೂ ಪವನ್ ಆರೋಪಿಗಳಾಗಿದ್ದಾರೆ.

ಡಿಸೆಂಬರ್ 11 ರಂದು ರೌಡಿಶೀಟರ್ ನಾಗರಾಜ್ ನನ್ನ ಹತ್ಯೆ ಮಾಡಿದ್ದ ಆರೋಪಿಗಳು ಇವರಾಗಿದ್ದಾರೆ. ಪಾರ್ಟಿ ಮಾಡುವ ನೆಪದಲ್ಲಿ ಕರೆ ತಂದು ಬರ್ಬರವಾಗಿ ಕೊಲೆ ಮಾಡಿದ್ದರು. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದ ಆರೋಪಿಗಳು ಪರಾರಿಯಾಗಿದ್ದರು. ಮೈಲಸಂದ್ರದ ಗ್ರೀನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ನಡೆದಿದ್ದ ಘಟನೆಯಲ್ಲಿ
ವಿವಿ ಪುರಂ ಠಾಣೆಯ ರೌಡಿಶೀಟರ್ ನಾಗರಾಜ್ ಕೊಲೆಯಾಗಿದ್ದನು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ