ಬಜರಂಗದಳ ನಿಷೇಧ ಹಾಸ್ಯಾಸ್ಪದ

ಗುರುವಾರ, 4 ಮೇ 2023 (16:40 IST)
ಬಜರಂಗದಳ ದೇಶದ ಪರವಾಗಿ ಹೋರಾಟ ಮಾಡುವ ಸಂಘಟನೆ. ಇದನ್ನು ನಿಷೇಧ ಮಾಡ್ತೀವಿ ಅನ್ನೋದು ಹಾಸ್ಯಾಸ್ಪದ.
ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಅಲ್ವಾ ನಿಷೇಧ ಮಾಡೋದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ B.Y ವಿಜಯೇಂದ್ರ ಲೇವಡಿ
ಮಾಡಿದ್ರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೌರವ ಕೊಟ್ಟಿದ್ದಾರೆ. ಖರ್ಗೆ ಮೋದಿ ಬಗ್ಗೆ ಹೇಗೆ ಮಾತಾಡ್ತಿದ್ದಾರೆ ಅಂತಾ ನೋಡಿದ್ದೀವಿ. ಆದರೆ ಅಪ್ಪ-ಮಗ ಮೋದಿ ಅವರ ಬಗ್ಗೆ ಹೇಗೆ ಮಾತನಾಡ್ತಿದ್ದಾರೆ ಅಂತಾ ಜನ ನೋಡ್ತಿದ್ದಾರೆ ಎಂದು ಕಿಡಿಕಾರಿದ್ರು.. ರಾಜ್ಯವನ್ನು ಕೇಂದ್ರದ ಎಟಿಎಂ ಮಾಡಲು ರಾಜ್ಯದ ಕಾಂಗ್ರೆಸ್​​ ನಾಯಕರು ಯೋಚಿಸಿದ್ದರು. ಆದರೆ ಮೇ 13ರ ಫಲಿತಾಂಶದಲ್ಲಿ ಕಾಂಗ್ರೆಸ್​ಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ರು.. ಕಾಂಗ್ರೆಸ್ ಪಕ್ಷಕ್ಕೆ ವೀರಶೈವ ಲಿಂಗಾಯತರ ಬಗ್ಗೆ ಅನುಕಂಪ ಆರಂಭವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಸಿಕ್ಕಿದಾಗ ವೀರಶೈವರನ್ನು ತುಳಿಯುವ ಕೆಲಸ ಮಾಡಿದೆ. ಆದರೆ ಈಗ ವೀರಶೈವರ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದೆ. ಕೇಂದ್ರದ ವರಿಷ್ಠರು ನನ್ನ ಬಗ್ಗೆ ವಿಶ್ವಾಸ ಇಟ್ಟಿದ್ದಾರೆ. ನನ್ನ ಚುನಾವಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾನು ಯಾವುದೇ ಸ್ಥಾನಮಾನ ಬಯಸಿ ರಾಜಕಾರಣ ಮಾಡ್ತಿಲ್ಲ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ