ಬಿಎಸ್ ವೈ ಯನ್ನು ಮತ್ತೆ ತರಾಟೆಗೆ ತೆಗೆದುಕೊಂಡ ಬಿಜೆಪಿ ಹೈಕಮಾಂಡ್

ಗುರುವಾರ, 14 ಫೆಬ್ರವರಿ 2019 (11:03 IST)
ಬೆಂಗಳೂರು : ಅಪರೆಷನ್ ಕಮಲ ಆಡಿಯೋ ಬಹಿರಂಗಗೊಂಡ ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

‘ದೋಸ್ತಿಗಳ ಕಿತ್ತಾಟ ಎಲ್ಲೆಡೆ ಕಂಡುಬರ್ತಿದೆ. ಜಗಜ್ಜಾಹೀರಾಗಿದೆ. ಇದನ್ನು ಎನ್‍ಕ್ಯಾಶ್ ಮಾಡ್ಕೊಳ್ಳೋದು ಬಿಟ್ಟು ನೀವು ಮಾಡ್ತಿರೋದೇನು..? ನೀವು ಬಿರುಕು ದೊಡ್ಡದು ಮಾಡೋದು ಬಿಟ್ಟು ತೇಪೆ ಹಚ್ತಿದ್ದೀರಿ. ಇದರಿಂದ ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರ ತರ್ತಾ ಇದ್ದೀರಿಎಂದು ಕಿಡಿಕಾರಿದ್ದಾರೆ.

 

‘ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಬರೀ ಇದರಲ್ಲೇ ಮುಳುಗಿದ್ರೆ, ಪಕ್ಷ ಸಂಘಟನೆ ಯಾವಾಗ ಮಾಡೋದು, ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ತೀರಾ? ಈ ಬೆಳವಣಿಗೆಗಳಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತದೆ. ಡ್ಯಾಮೇಜ್ ಕಂಟ್ರೋಲ್‍ಗೆ ಹಾಸನ ಗದ್ದಲ ಪ್ರಕರಣವನ್ನು ಹೈಪ್ ಮಾಡಿ. ಈ ಕೂಡಲೇ ಎಲ್ಲೆಡೆ ಪ್ರೊಟೆಸ್ಟ್ ಮಾಡಿ’ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ