ಟಿಪ್ಪು ದೇಶಭಕ್ತ ಅನ್ನೋದು ಬಿಜೆಪಿಗರಿಗೆ ತಡವಾಗಿ ಅರಿವಾಗಿದೆ: ಸಚಿವ ಅಂಜನೇಯ

ಶನಿವಾರ, 11 ನವೆಂಬರ್ 2017 (18:18 IST)
ಟಿಪ್ಪು ದೇಶಭಕ್ತ ಅನ್ನೋದು ಬಿಜೆಪಿಗರಿಗೆ ತಡವಾಗಿ ಅರಿವಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಅಂಜನೇಯ ಹೇಳಿದ್ದಾರೆ.
ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕೊನೆಗೂ ಬಿಜೆಪಿ ನಾಯಕರಿಗೆ ಟಿಪ್ಪು ಸುಲ್ತಾನ್ ದೇಶಭಕ್ತ ಎನ್ನುವುದು ಅರಿವಾಗಿರುವುದು ಸಂತಸದ ಸಂಗತಿ ಎಂದರು.
 
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಲ್ಲಿ ಭಾಗಿಯಾದ ಬಿಜೆಪಿ ಶಾಸಕ ಆನಂದ್ ಸಿಂಗ್ ಸೇರಿದಂತೆ ಇತರ ನಾಯಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ನಂಬಿ ಬರುವುದಾದರೇ ಅವರಿಗೆ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಆಹ್ವಾನ ನೀಡಿದ್ದಾರೆ.
 
ನಾವು ಯಾವುದೇ ಜಯಂತಿಯ ವಿರೋಧಿಯಲ್ಲ. ಪ್ರತಿಯೊಬ್ಬ ಮಹಾನ್ ಸಾಧಕರ ಜಯಂತಿಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ