ಆ ರೋಗಕ್ಕೆ ಹೆದರಿ ಜೊತೆಯಾಗಿ ದಂಪತಿ ಆತ್ಮಹತ್ಯೆ

ಸೋಮವಾರ, 14 ಅಕ್ಟೋಬರ್ 2019 (15:32 IST)
ಹಬ್ಬದ ಸಂಭ್ರಮದಲ್ಲಿ ಆ ಮನೆ ಮಂದಿ ಇದ್ದರೆ, ಆ ದಂಪತಿ ಮಾತ್ರ ಈ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗೋ ಮೂಲಕ ಸಂತಸ ತುಂಬಿದ್ದ ಮನೆಯಲ್ಲಿ ಕಣ್ಣೀರು ಹರಿಯುವಂತಾಗಿದೆ.

ಕೌಟುಂಬಿಕ ಕಾರಣದಿಂದ ಹಾಗೂ ಖಿನ್ನತೆಗೆ ಒಳಗಾಗಿದ್ದ ದಂಪತಿ ಜೊತೆಯಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಒಂದೇ ಸೀರೆಗೆ ನೇಣು ಬಿಗಿದುಕೊಂಡು ಪತಿ ಸಂತೋಷ್, ಪತ್ನಿ ಪಾರ್ವತಿ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಖಿನ್ನತೆ ರೋಗದಿಂದಾಗಿ ದಂಪತಿ ನರಳುತ್ತಿದ್ದರು ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವನ್ನು ಪೊಲೀಸರು ಪತ್ತೆ
ಮಾಡುತ್ತಿದ್ದಾರೆ.  ಶಿವಮೊಗ್ಗದ ಆಗರದಳ್ಳಿ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ