ಅತ್ಯಾಚಾರಿಗಳ ಎನ್ಕೌಂಟರ್: ವಿಶ್ವನಾಥ ಸಜ್ಜನರ್ ಕಾರ್ಯಕ್ಕೆ ಪ್ರಶಂಸೆಯ ಮಹಾಪೂರ

ಶುಕ್ರವಾರ, 6 ಡಿಸೆಂಬರ್ 2019 (16:42 IST)
ಹೈದ್ರಾಬಾದ್ ನಲ್ಲಿ ಪಶು ವೈದ್ಯೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗಳಿಗೆ ಎನ್ ಕೌಂಟರ್ ಮಾಡಿರುವುದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಹೈದರಾಬಾದಿನಲ್ಲಿ ನಡೆದ ಅಮಾನವೀಯ ಕೃತ್ಯಕ್ಕೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವಕ್ಕೆ ಸೂಕ್ತ ಗೌರವವನ್ನು ನೀಡಿದೆ. ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡುವ ಮೂಲಕ ದೇಶದಲ್ಲಿ ಭದ್ರತೆಗಾಗಿ ಸರ್ಕಾರ ಹೊಸ ನಿರ್ಧಾರವನ್ನು ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ.

ಅಲ್ಲದೇ ನಮ್ಮ ಗಂಡು ಮೆಟ್ಟಿದ ನಾಡಿನ ಹುಬ್ಬಳ್ಳಿಯ ಹುಲಿ ವಿಶ್ವನಾಥ ಸಜ್ಜನರ್ ಕಾರ್ಯ ಶ್ಲಾಘನೀಯ ಎಂದು ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ರು

ಹುಬ್ಬಳ್ಳಿಯ ಹುಲಿ ವಿಶ್ವನಾಥ ಸಜ್ಜನರ್ ಅವರ ಕಾರ್ಯಕ್ಕೆ ದೇಶಾದ್ಯಂತ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ