ಮಾದಕ ವ್ಯಸನಿ ಮಾಡಿದ ಅನಾಹುತ; ತಾಯಿಯ ಅಣ್ಣನ ಮಗನನ್ನೇ ಕೊಂದನಾ ಪಾಪಿ?

ಗುರುವಾರ, 4 ಜುಲೈ 2019 (16:17 IST)
ಮಾದಕ ವ್ಯಸನಿಯೊಬ್ಬ ಮಾಡಬಾರದ ಕೆಲಸ ಮಾಡಿ ಇದೀಗ ಕಂಬಿ ಎಣಿಸುವಂತಾಗಿದೆ.

ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತನ್ನ ತಾಯಿಯ ಅಣ್ಣನ ಮಗನನ್ನು ಕೊಲೆಮಾಡಿದ ಘಟನೆ ವರದಿಯಾಗಿದೆ.

ಈ ಕೊಲೆ ಕುಟುಂಬದ ಜನರಲ್ಲಿನ ಜಗಳದಿಂದಾಗಿರಬಹುದೆಂದು ಮೇಲ್ನೋಟಕ್ಕೆ ಊಹೆ ಮಾಡಲಾಗಿದೆ. ಮಂಗಳೂರಿನ ತೊಕ್ಕೊಟ್ಟು ಚಂಬುಗುಡ್ಡೆ ಪ್ರದೇಶದಲ್ಲಿ ಈ ಪ್ರಕರಣ ಸಂಭವಿಸಿದೆ.

ನಾರಾಯಣ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ನಾರಾಯಣನು ತನ್ನ ತಂದೆಯ ತಂಗಿಯಾಗಿರುವ ಲಲಿತಾ ಎಂಬುವರ ಮನೆಯಲ್ಲಿ ವಾಸವಿದ್ದನು. ಲಲಿತಾ ಅವರ ಪುತ್ರ ರಾಜೇಶ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಾರಾಯಣನು ಲಲಿತಾರ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸ ಮಾಡಿಕೊಂಡಿದ್ದನು. ರಾಜೇಶನು ಗುಜರಾತ್ ನಲ್ಲಿದ್ದ. ರಜೆ ಮೇಲೆ ಊರಿಗೆ ಬಂದಿದ್ದನು.

ಕೌಟುಂಬಿಕ ಜಗಳ ಹಿನ್ನೆಲೆಯಲ್ಲಿ ರಾಜೇಶನೇ ನಾರಾಯಣನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ಕೊಲೆ ಆರೋಪಿಯನ್ನು ಉಲ್ಲಾಳ ಪೊಲೀಸರು ಬಂಧನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ