ಡ್ರೈನೇಜ್ ನೀರಿನಿಂದ ಕೆರೆ ಮಲಿನಮಯ​​

ಮಂಗಳವಾರ, 4 ಜುಲೈ 2023 (15:14 IST)
ವಿಜಯಪುರ ತಾಲೂಕಿನ ಹಂಚನಾಳ ಕೆರೆಗೆ ಡ್ರೈನೇಜ್ ನೀರು ಮಿಶ್ರಣವಾಗುತ್ತಿರುವ ಕಾರಣ ನೀರು ಸಂಪೂರ್ಣವಾಗಿ ‌ಗಬ್ಬೆದ್ದು ನಾರುತ್ತಿದೆ. ಇತ್ತೀಚೆಗೆ ನಡೆದ ಮೊದಲ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್​​ ಅವರು ಇದೇ ಕೆರೆಯ ವಿಚಾರವನ್ನು ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದರು.. ಆದರೆ ಇದುವರೆಗೆ ಹಂಚನಾಳ ಕೆರೆಗೆ ಡ್ರೈನೇಜ್ ನೀರು ಬರುವುದು ಮಾತ್ರ ನಿಂತಿಲ್ಲ.. ಒಂದು ಸಮಯದಲ್ಲಿ ಈ ಕೆರೆಯ ನೀರನ್ನು ಈ ಸುತ್ತಮುತ್ತಲಿನ‌ ತಾಂಡಾದ ಜನರು ಕುಡಿಯಲು ಬಳಸುತ್ತಿದ್ದರು.. ಆದರೆ ಇಂದು ಈ ನೀರಿನ‌ ಸಮೀಪ ಹೋಗುವುದಕ್ಕೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಕೆರೆ ಮಲಿನಮಯವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ