ಭದ್ರಾ ಎಡದಂಡೆ ಒಡೆದು ಕೃಷಿ ಭೂಮಿ ಜಲಾವೃತ

ಮಂಗಳವಾರ, 30 ಆಗಸ್ಟ್ 2022 (17:07 IST)
ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಭದ್ರಾ ಎಡದಂಡೆ ಕಾಲುವೆಯ ತಡೆಗೋಡೆ ಒಡೆದು ಭತ್ತ, ಅಡಿಕೆ ತೋಟ ಸೇರಿದಂತೆ ಸಾವಿರಾರು ಎಕರೆ ಕೃಷಿ ತೋಟಗಳಿಗೆ ಹಾನಿಯಾಗಿದೆ. ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಕೆರೆ ಕೋಡಿಗಳು ತುಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ 1955ರಲ್ಲಿ ಕಟ್ಟಿದ್ದ ಕಾಲುವೆ ತಡೆಗೋಡೆ ಒಡೆದು ಪಕ್ಕದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ