ಭಗವಂತ ಬಂದರೂ ಬೆಂಗಳೂರನ್ನು ಕಾಪಾಡೋದಿಲ್ಲ

ಶುಕ್ರವಾರ, 17 ಜುಲೈ 2020 (13:59 IST)
ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಬೆಂಗಳೂರಲ್ಲಿ ಕೇಸ್ ಗಳು ಹೆಚ್ಚಾಗುತ್ತಲೇ ಸಾಗಿವೆ.

ಈ ನಡುವೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ ತಡೆಯಬೇಕಾದರೆ ಇನ್ನೂ 15 ದಿನಗಳವರೆಗೆ ಲಾಕ್ ಡೌನ್ ಮಾಡಬೇಕು.
ಹೀಗಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ ಬೆಂಗಳೂರು ಲಾಕ್ ಡೌನ್ ಮಾಡಿದ್ದಿರಿ. ಆದರೆ ಈ ನೆಪ ಮಾತ್ರದ ಲಾಕ್ ಡೌನ್ ಇಂದ ಫಲಿತಾಂಶ ನಿರೀಕ್ಷೆ ಕಷ್ಟ. ತಜ್ಙರ ಅಭಿಪ್ರಾಯ ಪಡೆದು ಕನಿಷ್ಠ 15 ದಿನವಾದ್ರೂ ಬೆಂಗಳೂರಿನಲ್ಲಿ ಬಿಗಿಯಾಗಿ ಲಾಕ್ ಡೌನ್ ಮಾಡಿ.
ಇಲ್ಲವಾದರೆ ಆ "ಭಗವಂತ" ಬಂದರೂ ಬೆಂಗಳೂರನ್ನ ಕಾಪಾಡುವುದು ಕಷ್ಟವಾಗಲಿದೆ.
ಹೀಗಂತ ಖಂಡ್ರೆ ಟ್ವಿಟ್ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ