ಚಳಿ ವಾತಾವರಣಕ್ಕೆ ತತ್ತರಿಸಿದ ಜನತೆ

ಮಂಗಳವಾರ, 20 ಡಿಸೆಂಬರ್ 2022 (16:55 IST)
ಡಿಸೆಂಬರ್ ಚಳಿಗೆ ಗಡಿಜಿಲ್ಲೆ ಚಾಮರಾಜನಗರದ ಜನತೆ ತತ್ತರಿಸಿ ಹೋಗಿದ್ದಾರೆ. ಬೆಳದಾದ್ರೂ ಸೂರ್ಯನ ಕಾಣದೆ ಮಂಜು ಮಸುಕಿನಲ್ಲಿ ಕಾಲಕಳೆಯುತ್ತಿದ್ದಾರೆ. ನಗರದೆಲ್ಲೆಡೆ ಬೆರಳೆಣಿಕೆಯಷ್ಟೇ ಜನರ ಓಡಾಟ, ಚಳಿಗೆ‌ ಮನೆಯಿಂದಾಚೆ ಬಾರದೆ ಮನೆಯೊಳಗೆಯೇ ಜನರು ಅವಿತ್ತುಕುಳಿತ್ತಿದ್ದಾರೆ. ಸ್ಪೆಟ್ಟರ್ ಟೋಪಿಗಳನ್ನು ಧರಿಸಿದ್ದರೂ ಜನರಲ್ಲಿ ನಡುಕ ಹುಟ್ಟಿಸುತ್ತಿರುವ ಭಾರಿ ಚಳಿ ಇದ್ದು, ಬೆಳಗಿನ ವಾಯು ವಿಹಾರಕ್ಕೂ ಹಿಂದು-ಮುಂದು ನೋಡುವ ಪರಿಸ್ಥಿತಿ ಎದುರಾಗಿದೆ. ಎತ್ತ ನೋಡಿದರೂ ಮಂಜು ಸುರಿಯುತ್ತಿರುವ ದೃಶ್ಯ ಕಾಣಸಿಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ