ಡ್ಯಾಂ ನೋಡಲು ಬಂದ ಜನ ಸಾಗರ: 25 ಜನರಿಗೆ ಗಾಯ

ಗುರುವಾರ, 16 ಆಗಸ್ಟ್ 2018 (17:59 IST)
ಡ್ಯಾಂನ  32 ಗೇಟ್ ಮೂಲಕ ಒಂದು  ಲಕ್ಷಕ್ಕೂ ಹೆಚ್ಚು cusec ನೀರು ನದಿಯ ಮೂಲಕ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಡ್ಯಾಂ ನೋಡಲು ಬಂದ ಜನರಲ್ಲಿ ಹತ್ತಕ್ಕೂ ಹೆಚ್ಚು ಸರಣಿ ಅಪಘಾತಗಳು ಸಂಭವಿಸಿವೆ.

ಹೊಸಪೇಟೆ ಟಿ ಬಿ ಡ್ಯಾಮ್ ಸುರಂಗ ಮಾರ್ಗದ ಬಳಿ ಘಟನೆ ನಡೆದಿವೆ. ಘಟನೆಯಲ್ಲಿ ಮರಿಯಮ್ಮನಹಳ್ಳಿ ನಿವಾಸಿ ಅನಿಲ್ ಕುಮಾರ್ ಶೆಟ್ಟಿ (23) ಸಾವನ್ನಪ್ಪಿದ್ದಾರೆ. ಮತ್ತೋರ್ವನಿಗೆ ಗಾಯಗಳಾಗಿವೆ. ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಕೆಳಗೆ ಬಿದ್ದು ಪೆಟ್ಟಾಗಿ ಸ್ಥಳದಲ್ಲೇ ಸಾವು.

ಆ ಬಳಿಕ ಗುಂಡ ಫಾರೆಸ್ಟ್ ಹತ್ತಿರ ಟಾಟಾ ಸುಮೋ ಮತ್ತು ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಇದರಲ್ಲಿ ನಾಲ್ಕು ಜನರಿಗೆ ಗಾಯಗಳಾಗಿವೆ. ಹನುಮಕ್ಕ, ಶೇಬಕ್, ಪಾರಮ್ಮ  ಗಾಯಳುಗಳು. ಇನ್ನು ಇತರ ವಾಹನಗಳ ನಡುವೆ ನಡೆದ ಸರಣಿ ಅಪಘಾತಗಳಲ್ಲಿ ರಾಘವೇಂದ್ರ, ವೆಂಕಣ್ಣ ಗೌಡ, ಸೇರಿದಂತೆ 25 ಕ್ಕೂ ಹೆಚ್ಚು ಜನರಿಗೆ ಗಾಯಗಳು ಅಗಿವೆ. ಎಲ್ಲ ಗಾಯಾಳುಗಳಿಗೆ ಹೊಸಪೇಟೆ ಸರಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

 



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ