ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ವ್ಯಕ್ತಿಗೆ ವಂಚಿಸಿದ ದುಷ್ಕರ್ಮಿಗಳು

ಭಾನುವಾರ, 6 ಜನವರಿ 2019 (11:37 IST)
ಬೆಂಗಳೂರು : ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿರುವ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


ದಾಬಸ್ ಪೇಟೆಯ ನಿವಾಸಿ ಮಹಾಂತೇಶ್ ವಂಚನೆಗೊಳಗಾದ ವ್ಯಕ್ತಿ. ಯಾರೋ ದುಷ್ಕರ್ಮಿಗಳು ಫೋನ್ ಮಾಡಿ ಎಟಿಎಂ ಕಾರ್ಡ್ ನವೀಕರಿಸುವುದಾಗಿ ಹೇಳಿ ಓಟಿಪಿ ನಂಬರ್ ಪಡೆದು ಮಹಾಂತೇಶ್ ಖಾತೆಯಲ್ಲಿದ್ದ 19 ಸಾವಿರ ರೂ ಹಣ ಎಗರಿಸಿ ವಂಚನೆ ಮಾಡಿದ್ದಾರೆ.  


ಈ ಘಟನೆಗೆ ಸಂಬಂಧಿಸಿದಂತೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ