ಇದನ್ನು ಬಳಸಲು ಇಷ್ಟವಿಲ್ಲದೇ ವೇಶ್ಯೆಯನ್ನೇ ಕೊಂದ ಭೂಪ

ಶುಕ್ರವಾರ, 24 ಜನವರಿ 2020 (06:14 IST)
ಬೆಂಗಳೂರು : ವೇಶ್ಯೆಯೊಂದಿಗೆ  ಲೈಂಗಿಕ ಕ್ರಿಯೆ ನಡೆಸಲು ಬಂದಾತ ಆಕೆಯನ್ನೇ ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ನಡೆದಿದೆ.


ಮುಕುಂದ ಕೊಲೆ ಮಾಡಿದ ಆರೋಪಿ, ಮಂಜುಳಾ ಕೊಲೆಯಾದ ವೇಶ್ಯೆ. ಲೈಂಗಿಕ ಕ್ರಿಯೆ ನಡೆಸಲು ಮಂಜುಳಾ ಮನೆಗೆ ಬಂದ ಮುಕುಂದನಿಗೆ ಕಾಂಡೋಮ್ ಬಳಸಲು ಹೇಳಿದ್ದಾಳೆ. ಆದರೆ ಇದಕ್ಕೆ ಆತ ಒಪ್ಪದ್ದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಆ ವೇಳೆ ಮಂಜುಳಾ ಕಿರುಚಾಡಿದ್ದಕ್ಕೆ ಕೋಪಗೊಂಡ ಮುಕುಂದ ಚಾಕುವಿನಿಂದ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ