ಪೊಲೀಸರು ತನಿಖೆ ಮಾಡುತ್ತಾರೆ-ಪರಮೇಶ್ವರ್

ಭಾನುವಾರ, 22 ಅಕ್ಟೋಬರ್ 2023 (10:33 IST)
ಸಚಿವ ಬೈರತಿ ಸುರೇಶ್ ಆಪ್ತರಿಂದ ನಕಲಿ ವೋಟರ್ ಐಡಿ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ನನ್ನ ಗಮನಕ್ಕೆ ಬಂದಿಲ್ಲ. ಅದು ಏನಿದ್ಯೊ ಕಾನೂನು ಕ್ರಮ ತಗೋತಾರೆ. ಪೊಲೀಸರು ತನಿಖೆ ಮಾಡುತ್ತಾರೆ ಎಂದ್ರು. ಸಚಿವ ಸತೀಶ್ ಜಾರಕಿಹೊಳಿಯದ್ದೇ ಪ್ರತ್ಯೇಕ ಬಣ ಇದ್ಯಾ ಎಂದು ಪ್ರಶ್ನಿಸಿದ್ರು. ಕಾಂಗ್ರೆಸ್ ಆ ರೀತಿ ಯಾವುದೇ ಬಣ ಇಲ್ಲ. ಇರೋದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎಂದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ