ನಮ್ಮ ಬಿಜೆಪಿಯಲ್ಲಿ ಒಂದು ರೋಗವಿದೆ,ಸುದ್ದಿ ಲೀಕ್ ಮಾಡ್ತಾರೆ: ಪ್ರತಾಪ್ ಸಿಂಹ

ಭಾನುವಾರ, 20 ಆಗಸ್ಟ್ 2017 (13:58 IST)
ಬಿಜೆಪಿ ಮುಖಂಡರಲ್ಲಿ ಒಂದು ರೋಗವಿದೆ. ಪಕ್ಷದ ಮಾಹಿತಿಗಳನ್ನು ಮಾಧ್ಯಮಗಳಿಗೆ ಲೀಕ್ ಮಾಡುತ್ತಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ
ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಗರಕ್ಕೆ ಬಂದಾಗ, ಯುವಮೋರ್ಚಾ ಬಗ್ಗೆ ಪ್ರಶ್ನಿಸಿ ಹೋರಾಟದಲ್ಲಿ ಎಷ್ಟು ಬಾರಿ ಪೆಟ್ಟು ತಿಂದಿದ್ದಿರಿ, ಎಷ್ಟು ಬಾರಿ ಟಿಯರ್ ಗ್ಯಾಸ್ ಎದುರಿಸಿದ್ದೀರಿ ಎಂದು ಪ್ರಶ್ನಿಸಿದ್ದಾಗಿ ತಿಳಿಸಿದರು. 
 
ಯುವಮೋರ್ಚಾದ ಕೆಲಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎನ್ನುವಾಗಲೇ ಅರ್ಧಕ್ಕೆ ನಿಲ್ಲಿಸಿ ಎಂದು ಗುಡುಗಿದ ಅಮಿತ್ ಶಾ, ನೀವು ಉಗ್ರ ಹೋರಾಟ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾಗಿ ಮಾಹಿತಿ ನೀಡಿದರು.
 
ಅಮಿತ್ ಶಾ ನನಗೆ ಪ್ರಶ್ನಿಸಿದ್ದಾರೆ ಎಂದರೆ ಯುವಮೋರ್ಚಾಗೆ ಪ್ರಶ್ನಿಸಿದಂತೆ. ಆದ್ದರಿಂದ ಮುಂದೆ ಉಗ್ರ ಹೋರಾಟ ಮಾಡಬೇಕು. ಮತ್ತೆ ಅಮಿತ್ ಶಾ ಕೇಳುವಂತಹ ಪರಿಸ್ಥಿತಿ ತಂದುಕೊಳ್ಳಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
 
ಬರುಬರುತಾ ರಾಯರ ಕುದುರೆ ಕತ್ತೆ ಎನ್ನುವಂತಾಯಿತು. ಬಿಜೆಪಿ ಯುವಮೋರ್ಚಾ ನಡೆಸುತ್ತಿರುವ ಹೋರಾಟ ಕುಂಠಿತವಾಗಿದೆ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಸಿದ್ದರಾಗಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ