ಅವನ್ಯಾರು ಇವನ್ಯಾರು ಎನ್ನುವುದನ್ನು ಬಿಡಬೇಕು

ಶುಕ್ರವಾರ, 21 ಏಪ್ರಿಲ್ 2023 (18:00 IST)
ಮಾಜಿ ಸಿಎಂ ಸಿದ್ದರಾಮಯ್ಯ ಅವನ್ಯಾರು ಇವನ್ಯಾರು ಎನ್ನುವ ಡೈಲಾಗ್ ಬಿಡಬೇಕು. ರಾಜಕೀಯದಲ್ಲಿ ತಾಳ್ಮೆಯಿಂದ ಹೆಜ್ಜೆ ಹಾಕಬೇಕು ಎಂದು ಸಚಿವ ವಿ.ಸೋಮಣ್ಣ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.. ಚಾಮರಾಜನಗರದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾವುದು ಶಾಶ್ವತವಲ್ಲ. ಜನ ಎಲ್ಲವನ್ನು ನೋಡುತ್ತಿದ್ದಾರೆ, ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಬೇಕು. ಈಗ ಅವರು ಮಾಜಿ ಸಿಎಂ ಅಲ್ಲ, ನಾನು ಮಾಜಿ ಮಂತ್ರಿಯೂ ಅಲ್ಲ. ಸಾಮಾನ್ಯ ಅಭ್ಯರ್ಥಿಗಳಷ್ಟೇ. ರಾಜ್ಯದಲ್ಲಿ ಐದು ವರ್ಷ ದೊರೆಯಾಗಿದ್ದವರು.. ಮೈಸೂರು ಚಾಮರಾಜನಗರಕ್ಕೆ ಏನು ಮಾಡಿದ್ದಾರೆ. ಇದು ನನಗೆ ಬಯಸದೇ ಬಂದ ಭಾಗ್ಯ, ಮುಂದೆ ಜನ ತೀರ್ಮಾನ ಮಾಡುತ್ತಾರೆ. ವಿಧಿಯಾಟ ಯಾರ್ಯಾರ ಬಾಯಿಯಲ್ಲಿ ಏನೇನು ಆಡಿಸಬೇಕು ಅದನ್ನ ಆಡಿಸುತ್ತಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ