ವಿಷಾನಿಲ ಸೇವಿಸಿ ಮೂವರು ಸಾವು

ಸೋಮವಾರ, 18 ಏಪ್ರಿಲ್ 2022 (20:47 IST)
ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿರುವಂತ ಮೀನಿನ ಫ್ಯಾಕ್ಟರಿಯೊಂದರಲ್ಲಿ ನಿನ್ನೆ ರಾತ್ರಿ ತ್ಯಾಜ್ಯ ಟ್ಯಾಂಕರ್ ಶುಚಿಗೊಳಿಸೋ ಸಂದರ್ಭದಲ್ಲಿ ವಿಷಾನಿಲ ಸೇವಿಸಿ, ಮೂವರು ಸಾವನ್ನಪ್ಪಿ, ಐವರ ಸ್ಥಿತಿ ಗಂಭೀರವಾಗಿರೋ ಘಟನೆ ನಡೆದಿದೆ.ಮೂಲಗಳ ಪ್ರಕಾರ ಎಸ್ ಇ ಝಡ್ ವ್ಯಾಪ್ತಿಯಲ್ಲಿರುವಂತ ಮೀನಿನ ಫ್ಯಾಕ್ಟರಿಯಲ್ಲಿ ರಾತ್ರಿ ವೇಳೆ ಕಾರ್ಮಿಕರು ಮೀನಿನ ತ್ಯಾಜ್ಯದ ಟ್ಯಾಂಕರ್ ಶುಚಿಗೊಳಿಸಲು ಕೆಳಗೆ ಇಳಿದ ಸಂದರ್ಭದಲ್ಲಿ, ಏಕಾಏಕಿ ಅಸ್ವಸ್ಥಗೊಂಡಿದ್ದಾನೆ. ಆತನನ್ನು ರಕ್ಷಿಸಲು ಹೋದಂತ ಮತ್ತೆ 8 ಮಂದಿ ಕೂಡ ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಮೂವರು ಸಾವನ್ನಪ್ಪಿ, ಐವರು ಗಂಭೀರ ಸ್ಥಿತಿಯನ್ನು ತಲುಪಿರೋದಾಗಿ ತಿಳಿದು ಬಂದಿದೆ. ಈ ವಿಷಾನಿಲ ದುರಂತದಲ್ಲಿ ಸಾವನ್ನಪ್ಪಿದವರನ್ನು ಪಶ್ಚಿಮ ಬಂಗಾಳದ ಮೂಲಕ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಝಾಮುದ್ದೀನ್ ಸಾಬ್ ಎಂದು ಗುರುತಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ