ದುರಸ್ಥಿಗೊಳ್ಳದ ರೈಲ್ವೆ ಸುರಂಗ ಮಾರ್ಗ

ಶುಕ್ರವಾರ, 5 ಅಕ್ಟೋಬರ್ 2018 (16:16 IST)
ಕಳೆದ ಅಗಸ್ಟ್ ನಲ್ಲಿ ಸುರಿದ ಮಹಾಮಳೆಯಿಂದ ಕೊಚ್ಚಿಹೋಗಿದ್ದ‌ ರೈಲ್ವೆ ಹಳಿಗಳ ದುರಸ್ಥಿ ಕಾರ್ಯ ಈಗಲೂ ಪೂರ್ಣಗೊಂಡಿಲ್ಲ.
ಮಹಾಮಳೆಗೆ ಕೊಚ್ಚಿ ಹೋಗಿದ್ದ ರೈಲ್ವೆ ಹಳಿಗಳ ದುರ್ಥಿ ಕಾರ್ಯ ಪೂರ್ಣಗೊಂಡಿಲ್ಲ. ಹಾಸನ-ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮುಚ್ಚಿಹೋಗಿದ್ದ‌ ಸುರಂಗ ಮಾರ್ಗಗಳನ್ನು ರೈಲ್ವೆ ಸಿಬ್ಬಂದಿ ದುರಸ್ಥಿಪಡಿಸುತ್ತಿದ್ದಾರೆ.

ಕಾಮಗಾರಿ ನಡೆಯುತ್ತಿರುವುದರಿಂದ ಪ್ರಯಾಣಿಕರ ರೈಲು ಸಂಚಾರಕ್ಕೆ ಇನ್ನೂ ಸಿದ್ದಗೊಳ್ಳದ ರೈಲ್ವೆ ಟ್ರ್ಯಾಕ್ ಪ್ರಯಾಣಿಕರ ಸಂಕಷ್ಟಕ್ಕೆ ಕಾರಣವಾಗಿದೆ.

ಸಂಪೂರ್ಣ ಮುಚ್ಚಿ ಹೋಗಿದ್ದ ಸುಬ್ರಹ್ಮಣ್ಯ-ಶಿರಬಾಗಿಲು ನಡುವಿನ ರೈಲ್ವೆ ಸುರಂಗ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಭಾರಿ ಭೂ ಕುಸಿತದಿಂದ ಮುಚ್ಚಿದ್ದ ಹಳಿಗಳನ್ನ ಸಹಜ ಸ್ಥಿತಿಗೆ ತರಲು ಒಂದುವರೆ ತಿಂಗಳಿನಿಂದ ನಡೆಯುತ್ತಿರುವ ದುರಸ್ಥಿ ಇದಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ