ವಾಣಿವಿಲಾಸ ಭರ್ತಿ – ಬೀದಿಗೆ ಬಿದ್ದ ಸುಡುಗಾಡು ಸಿದ್ಧರು

ಸೋಮವಾರ, 21 ಅಕ್ಟೋಬರ್ 2019 (17:36 IST)
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಕೆರೆ, ಕಟ್ಟೆಗಳು ತುಂಬಿದ್ದು, ಹಳ್ಳಕೊಳ್ಳಗಳು ಜೀವ ತುಂಬಿ ಹರಿಯುತ್ತಿವೆ.

ಹೊಸದುರ್ಗ ತಾಲೂಕಿನ ಬೆನಕನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ. ದೇವಪುರದ ಕಾಲನಿಯಲ್ಲಿ ಕೆಲವು ಮನೆಗಳು ಜಲಾವೃತವಾಗಿವೆ.

ಹೊಸದುರ್ಗ ಹಾಗೂ ಹೊಳಲ್ಕೆರೆ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ವೇದಾವತಿ ನದಿ ಕೂಡಾ ಜೀವ ತುಂಬಿಕೊಂಡಿದೆ. ವಾಣಿ ವಿಲಾಸ ಸಾಗರಕ್ಕೆ ಸಾಕಷ್ಟು ನೀರು ಹರಿಯುತ್ತಿದೆ.

ಹೊಳಲ್ಕೆರೆ ತಾಲೂಕಿನ ಚನ್ನಸಮುದ್ರದ ಗಂಗಮ್ಮನಕೆರೆ ಒಡೆದು ನೀರು ಹಳ್ಳದ ಮೂಲಕ ಗಂಗಸಮುದ್ರ ಗ್ರಾಮದ ಕೆರೆ ಸೇರುತ್ತಿದೆ.

ಹೊಳಲ್ಕೆರೆ ತಾಲೂಕಿನ ನಾಯಕರಕಟ್ಟೆ ಗ್ರಾಮದಲ್ಲಿ 30 ಗುಡಿಸಲು ಜಲಾವೃತವಾಗಿವೆ. ಸುಡುಗಾಡು ಸಿದ್ಧರಿಗೆ ಸೇರಿದ ಗುಡಿಸಲುಗಳು ಜಲಾವೃತವಾಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ