ಮೇಯರ್ ಆದ ಬೆನ್ನಲ್ಲೇ ಗೌತಮ್ ಕುಮಾರ್ ಗೆ ಪ್ರತಿಭಟನೆಯ ಬಿಸಿ

ಮಂಗಳವಾರ, 1 ಅಕ್ಟೋಬರ್ 2019 (13:14 IST)
ಬೆಂಗಳೂರು: ನೂತನ ಮೇಯರ್ ಆಗಿ ಆಯ್ಕೆಯಾಗುತ್ತಿದ್ದ ಬೆನ್ನಲ್ಲೇ ಗೌತಮ್ ಕುಮಾರ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿದೆ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಗೌತಮ್ ಕುಮಾರ್ ಮೇಯರ್ ಆಗಿ ಆಯ್ಕೆಯಾಗುತ್ತಿದ್ದಂತೇ ಪ್ರತಿಭಟನೆ ಮಾಡಿರುವ ವಾಟಾಳ್ ನಾಗರಾಜ್ ಬೆಂಗಳೂರನ್ನು ಮಾರ್ವಾಡಿಗಳ ಕೈಗಿಡಲಾಗಿದೆ. ಬೆಂಗಳೂರಿನಲ್ಲಿ ಕನ್ನಡಿಗರದ್ದೇ ಅಧಿಕಾರವಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೌತಮ್ ಕುಮಾರ್ ಮಾರ್ವಾಡಿ ಹಿನ್ನಲೆಯವರು ಎಂದಿರುವ ವಾಟಾಳ್ ಕರ್ನಾಟಕ ರಾಜಧಾನಿಯಲ್ಲಿ ಮಲಯಾಳಿಗಳು, ತಮಿಳರು, ಮಾರ್ವಾಡಿಗಳು ಇವರದ್ದೇ ಆಧಿಪತ್ಯವಾಗುತ್ತಿದೆ. ಇಲ್ಲಿ ಕನ್ನಡಿಗರಿಗೇ ಆದ್ಯತೆಯಿರಬೇಕು ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ