ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಬೆಂಬಲಿಗನ ಪುಂಡಾಟಿಕೆ

ಶುಕ್ರವಾರ, 27 ಏಪ್ರಿಲ್ 2018 (14:28 IST)
ವರುಣಾ: ಬಿ.ಎಸ್.ತಡಿಯೂರಪ್ಪನವರ ಪುತ್ರ ವಿಜಯೇಂದ್ರಗೆ ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅವರ ಬೆಂಬಲಿಗರ ಆಕ್ರೋಶ ಮುಂದುವರೆದಿದೆ. 
ವರುಣ ಬಿಜೆಪಿ ಅಭ್ಯರ್ಥಿ ಟಿ.ಬಸವರಾಜುಗೆ ಧಮ್ಕಿ ಹಾಕಿದ ವಿಜಯೇಂದ್ರ ಅಭಿಮಾನಿ ಈಗ ಸುದ್ದಿಯಾಗಿದ್ದಾರೆ. ರಘು ಎಂಬ ಅಭಿಮಾನಿಯಿಂದ ಬಸವರಾಜುಗೆ ಧಮ್ಕಿ ಹಾಕಲಾಗಿದೆ. ಎಲ್ಲರೂ ಟಿಕೆಟ್ ಬೇಡ ಅಂದ್ರೆ ನೀವು ಹೇಗೆ ತಗೊಂಡ್ರಿ. ನೀವು ತಗೊಂಡಿಲ್ಲ ಅಂದಿದ್ರೆ ವಿಜಯೇಂದ್ರ ಸುಲಭವಾಗಿ ಗೆಲ್ಲುತ್ತಿದ್ದರು.ಟಿಕೆಟ್ ತಗೊಂಡು ಈಗ ಅನುಭವಿಸ್ತೀರ ನೋಡಿ.ಅದೇಗೆ ಗೆಲ್ಲುತ್ತೀರ ನೋಡುತ್ತೇವೆ.ನಿಮ್ಮನ್ನ ಸೋಲಿಸೋಕೆ ವಿಜಯೇಂದ್ರ ಅಭಿಮಾನಿಗಳು ಎಲ್ಲ ರೆಡಿ ಮಾಡಿಕೊಂಡಿದ್ದೇವೆ ಎಂದು ಅವಾಜ್ ಹಾಕಿದ್ದಾನೆ. 
 
ಟಿಕೆಟ್ ಪಡೆದ ಮೇಲೆ ವಿಜಯೇಂದ್ರಣ್ಣನ್ನ ಭೇಟಿ ಮಾಡಿಲ್ಲ.ಪ್ರಚಾರಕ್ಕೂ ಕೂಡ ಬಂದಿಲ್ಲ ನೀವು. ವಿಜಯೇಂದ್ರ ಬೆಂಬಲಿಗರು ಏನು ಎಂದು ತೋರಿಸುತ್ತೇವೆ.ನಿಮಗೆಲ್ಲ ಪಾಠ ಕಲಿಸುತ್ತೇವೆ ಎಂದು ಫೋನ್ ನಲ್ಲಿ ರಘು ಧಮ್ಕಿ ಹಾಕಿದ್ದಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ