ಯುದ್ಧ ಶುರುವಾಗಿದೆ, ವಿಭೀಷಣ ಯಾರೆಂದು ನೋಡಬೇಕು: ಶೋಭಾ ಕರಂದ್ಲಾಜೆ

ಮಂಗಳವಾರ, 7 ಮಾರ್ಚ್ 2017 (14:40 IST)
ಯುದ್ಧ ಶುರುವಾಗಿದೆ, ನಾವೂ ಸಹ ರಣರಂಗಕ್ಕೀಳಿದಿದ್ದೇವೆ. ವಿಭೀಷಣ ಯಾರೆಂದು ನೋಡಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾರ್ಮಿಕವಾಗಿ ನುಡಿದಿದ್ದಾರೆ. 
 
ಎಸ್‌ಎಂಕೃಷ್ಣ ಬಿಜೆಪಿಗೆ ಬರುವುದರಿಂದ ಆನೆಬಲ ಬಂದಂತಾಗಿದೆ. ಮಾರ್ಚ್ 15 ರ ನಂತರ ಕೃಷ್ಣ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. 
 
ಕಾಂಗ್ರೆಸ್, ಜೆಡಿಎಸ್ ನಾಯಕರು ಯಡಿಯೂರಪ್ಪ ಕೈ ಬಲಪಡಿಸಲೆಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಕೃಷ್ಣ ಅವರ ಪ್ರಭಾವವೂ ಸಾಕಷ್ಟಿದೆ. 28 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಾಗಲಿದೆ ಎಂದು ಭವಿಷ್ಯ ನುಡಿದಿರುವುದಾಗಿ ತಿಳಿಸಿದ್ದಾರೆ.
 
ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ನಮ್ಮ ಶಕ್ತಿ ಕಡಿಮೆಯಿದೆ. ಹೀಗಾಗಿ ಅಂತಹ ಕ್ಷೇತ್ರಗಳಲ್ಲಿ ಪ್ರಬಲರಿಗೆ ಟಿಕೆಟ್ ಕೊಡುವುದು ಅಗತ್ಯವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ