ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ನಂಜನಗೂಡು ತಾಲ್ಲೂಕಿನ ಕಾಡಂಚಿನ 30ಗ್ರಾಮಗಳ ಪಕ್ಕದಲ್ಲೇ ನದಿ ಹರಿಯುತ್ತದ್ದರೂ ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸಿವೆ. ಈ ಭಾಗ ಪ್ರತಿನಿಧಿಸಿದ ಯಾರೂ ಇದನ್ನು ನನ್ನ ಗಮನಕ್ಕೆ ತಂದಿರಲಿಲ್ಲ. ನಮ್ಮ ಸರ್ಕಾರ ಬಂದು ಮೂರುವರೆ ವರ್ಷ ಆಯಿತು. ಮೊದಲೇ ನನ್ನ ಗಮನಕ್ಕೆ ತಂದಿದ್ದರೆ ಈಗಾಗಲೇ ಕಾಮಗಾರಿ ಮುಗಿಸಿ, ಕೆರೆಗಳಿಗೆ ನೀರು ಕೊಡುತ್ತದ್ದೆವು ಎಂದು ಹೇಳಿದರು.