ಬಿಜೆಪಿಯಂತೆ ಧರ್ಮದ ರಾಜಕಾರಣ ನಾವು ಮಾಡಲ್ಲ: ಸಚಿವ ದಿನೇಶ್ ಗುಂಡೂರಾವ್

Sampriya

ಬುಧವಾರ, 10 ಏಪ್ರಿಲ್ 2024 (14:56 IST)
ಬೆಂಗಳೂರು:  ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಕೋಮು ಪ್ರಚೋಧನೆಗೆ ಧಕ್ಕೆ ಆಗುವ ಹಾಗೇ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು ನಾವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಸಿದ್ಧಾಂತದಲ್ಲಿ ಬದುಕುತ್ತಿದ್ದೇವೆ.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು,  ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದೇ ಕಾಂಗ್ರೆಸ್‌ನ ಸಿದ್ದಾಂತ.

BJPಯಂತೆ ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುವ ದರ್ದು  ಕಾಂಗ್ರೆಸ್‌ಗೆ ಇಲ್ಲ.

ನಮ್ಮ ಪಕ್ಷ ಧರ್ಮಾಧಾರಿತ ರಾಜಕಾರಣವನ್ನು ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ.

ಹೀಗಿರುವಾಗ ಸಿದ್ದರಾಮಯ್ಯ ಹಿಂದೂಗಳ ಮತ ಬೇಡ ಎಂದು ಹೇಳಲು ಹೇಗೆ ಸಾಧ್ಯ?

ಹಾಗಾಗಿ ಇದು BJPಯ ಕುಟಿಲ ಕುತ್ಸೀತ ಸಂಚಿನ ಭಾಗವಷ್ಟೆ.

ಸೋಲಿನ ಭಯದಿಂದ ಕಂಗೆಟ್ಟಿರುವ BJPಯವರು ಅನ್ಯದಾರಿ ಕಾಣದೇ ಇಂತಹ ಸುಳ್ಳುಗಳ ಮೂಲಕ ಜನರನ್ನು ಗೊಂದಲಗೊಳಿಸುತ್ತಿದ್ದಾರೆ‌.

ಆದರೆ BJPಯ ಅಸಲಿ ಮುಖ ತಿಳಿದಿರುವ ರಾಜ್ಯದ ಜನರಿಗೆ ಯಾವುದು ಸತ್ಯ.?

ಯಾವುದು ಸುಳ್ಳು ಎಂಬುದನ್ನು ತಿಳಿಯುವ ಪ್ರಜ್ಞಾವಂತಿಕೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ