ಪ್ರವಾಹಕ್ಕೆ ಸೆಡ್ಡು ಹೊಡೆದವ ಏನಾದ?: ಮಾನವೀಯತೆ ಮರೆತ ಮನಸ್ಸುಗಳು

ಶನಿವಾರ, 17 ಆಗಸ್ಟ್ 2019 (16:49 IST)
ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆಯನ್ನ ಮರೆತ ಜನರು ವಿಡಿಯೋ ಮಾಡಿ ಅಮಾನವೀಯತೆ ಮೆರೆದಿದ್ದಾರೆ.

ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯ ಪರದಾಟ ಮುಂದುವರಿದಿತ್ತು. ಕೃಷ್ಣಾ ನದಿಯ ಸೆಳೆತಕ್ಕೆ ಸಿಲುಕಿ ಸಾವು ಬದುಕಿನ ಮಧ್ಯೆ ವ್ಯಕ್ತಿಯ ಹೋರಾಟ ನಡೆಸಿದ್ದಾನೆ.

ಜನವಾಡದ ತನ್ನ ಮನೆಯ ಪರಿಸ್ಥಿತಿ ನೋಡಲು ಈಜಿ ಹೋಗಿದ್ದ ವ್ಯಕ್ತಿ ನೀರಿನ ಪ್ರವಾಹಕ್ಕೆ ಸಿಲುಕಿದ್ದಾನೆ.

ಮಹಾದೇವ ಎಂಬ ವ್ಯಕ್ತಿಯಿಂದ ನದಿ ದಾಟುವ ಹುಚ್ಚು ಧೈರ್ಯ ಪ್ರದರ್ಶನ ಮಾಡಿದ್ದಾನೆ. ಜನವಾಡ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮವಾಗಿದೆ.

ನದಿಯಲ್ಲಿ ವ್ಯಕ್ತಿ ಕೊಚ್ಚಿ ಹೋಗುತ್ತಿದ್ದರೂ ಮೂಕ ಪ್ರೇಕ್ಷಕರಾಗಿ ಜನ ನೋಡುತ್ತಾ ನಿಂತಿದ್ದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ