ಪರಮೇಶ್ವರ್ ಮೇಲಿನ ಐಟಿ ದಾಳಿ ಬಗ್ಗೆ ಹೆಚ್.ವಿಶ್ವನಾಥ್ ಹೇಳಿದ್ದೇನು?

ಸೋಮವಾರ, 14 ಅಕ್ಟೋಬರ್ 2019 (11:58 IST)
ಮೈಸೂರು : ಮಾಜಿ ಡಿಸಿಎಂ ಪರಮೇಶ್ವರ್ ಮೇಲೆ ನಡೆದ ಐಟಿ ದಾಳಿ ರಾಜಕೀಯ ಪ್ರೇರಿತ ಅಂದರೆ ಅದು ಅಂಬೇಡ್ಕರ್ ಗೆ ಮಾಡಿದ ಅಪಮಾನ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.



ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಪರಮೇಶ್ವರ್ ಅವರೇ ನಮ್ಮ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ ಎಂದು ಹೇಳಿದ್ದಾರೆ. ಆದರೆ ಕೆಲವರು ಇದು ರಾಜಕೀಯ ಪ್ರೇರಿತ ಎನ್ನುತ್ತಿದ್ದಾರೆ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ತಪ್ಪು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಎಲ್ಲವನ್ನು ವಿರೋಧಿಸಬಾರದು. ಅನುಭವವಿರುವ ನೀವು ಹೀಗೆ ಮಾಡಿದರೆ ನಿಮ್ಮದೊಡ್ಡ ವ್ಯಕ್ತಿತ್ವ ಏರಲ್ಲ, ಕುಗ್ಗುತ್ತೆ ಎಂದು ಹೇಳಿದ್ದಾರೆ.


 

ಕಾನೂನು ರೂಪಿಸುವ ರಾಜಕಾರಣಿಗಳೇ ಕಾನೂನಿಗೆ ಬೆಲೆ ಕೊಡದಿದ್ದರೆ ಹೇಗೆ? ತಪ್ಪು ಮಾಡಿಲ್ಲವೆಂದಾದರೆ ಕಾನೂನಿನಲ್ಲಿ ಯಾರಿಗೂ ಶಿಕ್ಷೆಯಾಗಲ್ಲ, ಹೀಗಾಗಿ ಐಟಿ ದಾಳಿಗಳನ್ನರಾಜಕೀಯ ಮಿಶ್ರಣ ಮಾಡೋದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ