ಮಕ್ಕಳಿಂದ ಬೀದಿಗೆ ಬಿದ್ದ ಮಹಿಳೆಗೆ ನಟ ಶ್ರೀಮುರುಳಿ ಮಾಡಿದ್ದೇನು?

ಭಾನುವಾರ, 20 ಜನವರಿ 2019 (22:05 IST)
ಸ್ಯಾಂಡಲ್ ವುಡ್ ಚಿತ್ರನಟ ಶ್ರೀ ಮುರುಳಿ ಮತ್ತೆ ಸುದ್ದಿಯಲ್ಲಿದ್ದಾರೆ.
ಮಕ್ಕಳಿಂದ ಬೀದಿಗೆ ತಳ್ಳಲ್ಪಟ್ಟ ತಾಯಿಯೊಬ್ಬರ ಕಷ್ಟವನ್ನು ನಟ ಶ್ರೀ ಮುರುಳಿ ಆಲಿಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಸ್ನಾನಘಟ್ಟದ ಬಳಿ ಶ್ರೀ ಮುರುಳಿ ಮಾನವೀಯತೆ ಅನಾವರಣಗೊಂಡಿತು.

ಚಿತ್ರವೊಂದರ ಚಿತ್ರೀಕರಣಕ್ಕಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ‌ ಶ್ರೀಮುರುಳಿ, ಸ್ನಾನಘಟ್ಟದ ಬಳಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ಕಂಡು ಮರುಗಿದರು. ಆ‌ ಮಹಿಳೆ ಬಳಿ ತೆರಳಿ ಸಾಂತ್ವನ‌ ಹೇಳಿ ತನ್ನೊಡನೆ ಬರುವಂತೆ ಶ್ರೀಮುರುಳಿ ಹೇಳಿದರು.

ಆದರೆ ಚಿತ್ರ ನಟನ ಆಹ್ವಾನವನ್ನು ನಯವಾಗಿ ಮಹಿಳೆ ಬೇಡವೆಂದರು. ವೃದ್ಧ ಮಹಿಳೆಗೆ ಶ್ರೀ‌ಮುರುಳಿಯಿಂದ ಸಹಾಯದ ಭರವಸೆ ನೀಡಲಾಯಿತು. ಕನ್ನಡ ಚಿತ್ರನಟನ ಮಾನವೀಯತೆ ಕಂಡು ಸ್ಥಳೀಯ ಜನರು ಪ್ರಶಂಸೆ‌ ವ್ಯಕ್ತಪಡಿಸಿದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ