ಅಪೃಪ್ತ ಶಾಸಕರು ಹೊಟ್ಟೆಗೆ ತಿಂದದ್ದು ಏನನ್ನು?

ಶನಿವಾರ, 27 ಜುಲೈ 2019 (17:50 IST)
ಅತೃಪ್ತ ಶಾಸಕರೆಲ್ಲಾ ಸೆಗಣಿ ತಿಂದು ಮುಂಬೈ ಗೆ ಹೋಗಿದ್ದಾರೆ. ಅವರು ಯಾರೂ ವಾಪಾಸ್ ಬರೋಲ್ಲ. ಹೀಗಂತ ಕಾಂಗ್ರೆಸ್ ಶಾಸಕರು ಹೇಳಿದ್ದಾರೆನ್ನಲಾಗುತ್ತಿರುವ ಮಾತುಗಳು ಸಧ್ಯ ವೈರಲ್ ಆಗುತ್ತಿವೆ.

ಬಿಜೆಪಿಯವರು ಹಾರ್ಸ್ ಟ್ರೇಡಿಂಗ್ ಮಾಡಿದ್ದಾರೆ. ಒಬ್ಬೊಬ್ಬ ಶಾಸಕರಿಗೆ 25 ರಿಂದ 30 ಕೋಟಿ ರೂಪಾಯಿ ಕೊಟ್ಟಿದ್ದಾರೆ ಅಂತ ಸದನದಲ್ಲೆ ಹೇಳಿದ್ದೇವೆ. ಹೋದವರಿಗೆಲ್ಲಾ ಮಂತ್ರಿಗಿರಿ ಕೊಡೋಕೆ ಆಗುತ್ತಾ? ಹೀಗಂತ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ ಎನ್ನಲಾಗ್ತಿದೆ.

ಬಿಜೆಪಿ ಸರ್ಕಾರದ ಅಳಿವು - ಉಳಿವು ಸೋಮವಾರ ತಿಳಿಯುತ್ತೆ. ಬಿಜೆಪಿ ಸರ್ಕಾರ ಬಂದರೂ ಬಹಳ ದಿನ ಉಳಿಯಲ್ಲ ಎಂದ್ರು.
ನನ್ನನ್ನು ಯಾರೂ ರೆಸಾರ್ಟ್ ಗೆ ಕರೆದಿಲ್ಲ. ನಾನು ಹೋಗೋಲ್ಲ ಅಂತ ಗೊತ್ತು. ಅದಕ್ಕೆ ಕರೆಯೋದಿಲ್ಲ. ರಾಜ್ಯಪಾಲರು ಸದನದ ನಿರ್ಣಯದಲ್ಲಿ ಮಧ್ಯಪ್ರವೇಶ ಮಾಡಬಾರದು ಅಂತ ಇದೆ ಅಂತ ಶಾಮನೂರು ಹೇಳಿದ್ದಾರೆನ್ನಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ