ಖಾತೆ ಬದಲಾಯಿಸಲು ಲಂಚ ಕೇಳಿದ್ದವನ ಕಥೆ ಏನಾಯ್ತು?

ಮಂಗಳವಾರ, 5 ಮಾರ್ಚ್ 2019 (18:56 IST)
ಹಳ್ಳಿಯ ರೈತರೊಬ್ಬರ ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಡಿಮಾಂಡ್ ಮಾಡಿದ ಅಧಿಕಾರಿ ತನ್ನ ತಪ್ಪಿಗೆ ಸರಿಯಾದ ಬೆಲೆ ತೆತ್ತಿದ್ದಾನೆ, ಕೋಲಾರದಲ್ಲಿ ಬಿಲ್ ಕಲೆಕ್ಟರ್, ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಉರಿಗಿಲಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೋಲಾರ ತಾಲೂಕಿನ ಉರಿಗಿಲಿ ಗ್ರಾಮ ಪಂಚಾಯಿತಿಯಲ್ಲಿ ಖಾತೆ ಬದಲಾವಣೆ ಮಾಡಿಕೊಡಲು ಲಂಚ ಕೇಳಿದ್ದ ಬಿಲ್ ಕಲೆಕ್ಟರ್ಗೆ ತಲಗುಂದ ಸರಸ್ವತಮ್ಮ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು.

ಖಾತೆ ಬದಲಾವಣೆ ಮಾಡಿಕೊಡಲು 10 ಸಾವಿರ ಲಂಚ ಕೇಳಿದ್ದ ಬಿಲ್ ಕಲೆಕ್ಟರ್ ಲಂಚ ಕೊಡದಿದ್ದರೆ ಕೆಲಸ ಮಾಡಿಕೊಡಲು ಆಗೋದಿಲ್ಲ ಅಂತಸಹಾಯಕ ಪ್ರದೀಪ್ ಮೂಲಕ ಲಂಚ ಕೇಳಿದ್ದರು. 5 ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿ ನಡೆದಿದೆ. ಪಂಚಾಯಿತಿ ಕಚೇರಿಯಲ್ಲಿಯೇ ಲಂಚ ಪಡೆಯುತ್ತಿದ್ದ ಬಿಲ್ ಕಲೆಕ್ಟರ್ ಈಗ ಇಂಗು ತಿಂದ ಮಂಗನಂತಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ