ಮಹಾದಾಯಿ ವಿಚಾರದಲ್ಲಿ ದಂಗೆಯೆದ್ದಾಗ ಯಾರಿಂದಲೂ ತಡೆಯಲು ಆಗಲ್ಲ-ಹೊರಟ್ಟಿ

ಮಂಗಳವಾರ, 6 ಫೆಬ್ರವರಿ 2018 (19:39 IST)

ಮಹಾದಾಯಿ ಕುಡಿಯುವ ನೀರಿನ ವಿಷಯದಲ್ಲಿ ಎಲ್ಲ ಮುಗಿದುಹೋದ ಮೇಲೆ ಬೆಂಕಿ ನಂದಿಸಿದರೆ ಪ್ರಯೋಜನವೇನು ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ಸಮಸ್ಯೆ ಬಗೆಹರಿಸದಿದ್ದರೆ ಜನರು ದಂಗೆಯೆದ್ದಾಗ ಅವರನ್ನು  ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

7.56 ಟಿಎಂಸಿ ನೀರಿಗಾಗಿ ಪ್ರಧಾನಮಂತ್ರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ನ್ಯಾಯಾಧೀಕರಣ ಕೂಡ ಗೋವಾದ ಪರವಾಗಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ, ವಿಚಾರಣೆ ವೇಳೆ ಈ  ಬಗ್ಗೆ ನಿರ್ಧಾರ ತಳೆಯಬೇಕಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ