ಅಂದಾನಿ, ಅಧಾನಿ, ಅಮಿತ್ ಷಾಗೆ ಬಂತಾ ಅಚ್ಛೇದಿನ್: ಸಿಎಂ
ಬೆಂಗಳೂರು: ಬಿಜೆಪಿಯವರು ಪರಿವರ್ತನಾ ರ್ಯಾಲಿ ಎಂದು ದೊಡ್ಡ ನಾಟಕ ಶುರು ಮಾಡಿದ್ದಾರೆ. ಇದು ಅವರು ಮಾಡಿದ ಪಾಪದ ಕೆಲಸದ ಪಶ್ಚಾತ್ತಾಪದ ರ್ಯಾಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಪ್ಪು ಹಣ ತಂದು ಪ್ರತಿ ಜನರ ಖಾತೆಗೂ 15 ಲಕ್ಷ ಹಾಕಲಿಕ್ಕೆ ಆಗಲಿಲ್ಲ. ನೋಟು ಅಮಾನ್ಯೀಕರಣದಿಂದ ಕಪ್ಪು ಹಣ ಇಟ್ಟವರೆಲ್ಲ ಸತ್ತು ಹೋದ್ರ. ಪಾಪ ಇದರಿಂದ ಬಡವರಿಗೆ ತೊಂದರೆಯಾಯ್ತು. ಅಚ್ಛೇ ದಿನ್ ಬಂತಾ, ಯಾರಿಗೆ ಬಂತು. ಅಂದಾನಿ, ಅಧಾನಿ, ಮಿಸ್ಟರ್ ಷಾ ಇವರಿಗೆ ಬಂತ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದು ಗುಡುಗಿದರು.