ಅಂದಾನಿ, ಅಧಾನಿ, ಅಮಿತ್ ಷಾಗೆ ಬಂತಾ ಅಚ್ಛೇದಿನ್: ಸಿಎಂ

ಗುರುವಾರ, 2 ನವೆಂಬರ್ 2017 (14:10 IST)
ಬೆಂಗಳೂರು: ಬಿಜೆಪಿಯವರು ಪರಿವರ್ತನಾ ರ್ಯಾಲಿ ಎಂದು ದೊಡ್ಡ ನಾಟಕ ಶುರು ಮಾಡಿದ್ದಾರೆ. ಇದು ಅವರು ಮಾಡಿದ ಪಾಪದ ಕೆಲಸದ ಪಶ್ಚಾತ್ತಾಪದ ರ್ಯಾಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕೆಜೆಪಿಲ್ಲಿದ್ದಾಗ ಬಿಜೆಪಿ ಬಗ್ಗೆ ಮತ್ತು ಅಡ್ವಾಣಿ ಬಗ್ಗೆ, ಜಗದೀಶ ಶೆಟ್ಟರ್ ಬಗ್ಗೆ ಏನೆಲ್ಲಾ ಮಾತಾಡಿದ್ದಾರೆ ಅನ್ನೋದನ್ನು ಹೇಳಲಿ. ಬ್ಲೂಫಿಲಂ ನೋಡಿದ್ದು, ಜೈಲಿಗೆ ಹೋಗಿ ಬಂದದ್ದನ್ನು, ಲೂಟಿ ಮಾಡಿದ್ದನ್ನು ಮಾತ್ರ ಜನರ ಮುಂದೆ ಹೇಳ್ಬೇಕಷ್ಟೆ ಎಂದರು.

ಕಪ್ಪು ಹಣ ತಂದು ಪ್ರತಿ ಜನರ ಖಾತೆಗೂ 15 ಲಕ್ಷ ಹಾಕಲಿಕ್ಕೆ ಆಗಲಿಲ್ಲ. ನೋಟು ಅಮಾನ್ಯೀಕರಣದಿಂದ ಕಪ್ಪು ಹಣ ಇಟ್ಟವರೆಲ್ಲ ಸತ್ತು ಹೋದ್ರ. ಪಾಪ ಇದರಿಂದ ಬಡವರಿಗೆ ತೊಂದರೆಯಾಯ್ತು. ಅಚ್ಛೇ ದಿನ್ ಬಂತಾ, ಯಾರಿಗೆ ಬಂತು. ಅಂದಾನಿ, ಅಧಾನಿ, ಮಿಸ್ಟರ್ ಷಾ ಇವರಿಗೆ ಬಂತ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದು ಗುಡುಗಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ