ಕುಡಿತದ ದಾಸರಾದವರು ಓದಲೇಬೇಕಾದ ದುರಂತ ಕಥೆ ಇದು

ಸೋಮವಾರ, 9 ಮೇ 2016 (08:37 IST)
ಪತ್ನಿ ಹಲ್ಲೆ ನಡೆಸಿದ್ದರಿಂದ ನೊಂದ ಕುಣಿಗಲ್‌ನ ಮಹಿಳೆಯೋರ್ವಳು ಮಕ್ಕಳಿಗೆ ಬೆಂಕಿ ಹಚ್ಚಿ ತಾನು ಕೂಡ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಘಟನೆ ನಿಮಗೆ ಗೊತ್ತಿರಲಿಕ್ಕೆ ಸಾಕು. ಕಳೆದ ವಾರ ಈ ಘಟನೆ ನಡೆದಿತ್ತು. ಪತ್ನಿ ಮತ್ತು ಮಕ್ಕಳ ಸಾವಿನಿ೦ದ ನೊ೦ದ ಪತಿ ಕೂಡ ಈಗ ನೇಣು ಬಿಗಿದುಕೊ೦ಡು ಮೃತಪಟ್ಟಿದ್ದಾನೆ. 

 
ಮೃತನನ್ನು ತಾಲ್ಲೂಕಿನ ಗಾಣಿಮೇಸ್ತ್ರೀಪಾಳ್ಯದ ನಿವಾಸಿ ಜಗದೀಶ್(32) ಎಂದು ಗುರುತಿಸಲಾಗಿದ್ದು  ಕಳೆದ ಮೇ 1 ರಂದು ಕುಡಿದ ಮತ್ತಿನಲ್ಲಿ ಆತ ಮುದ್ದೆಕೋಲಿನಿಂದ ಪತ್ನಿಯ ಮೇಲೆ ದಾಳಿ ನಡೆಸಿದ್ದ. ಆಕೆಯ ಕಾಲಿಗೆ ಗಂಭೀರ ಪೆಟ್ಟು ತಗುಲಿತ್ತು. ಇದರಿಂದ ನೊಂದಿದ್ದ ಪತ್ನಿ ಚ೦ದ್ರಮ್ಮ (26) ಮಗಳು ಧನು (4) ಮತ್ತು ಮಗ ಗೌತಮ್ (3) ನ ಜತೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. 
 
ಚಿಂತಾಜನಕ ಸ್ಥಿತಿಯಲ್ಲಿದ್ದ ತಾಯಿ ಮಕ್ಕಳನ್ನು ಬೆ೦ಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತ ಪಟ್ಟಿದ್ದರು. ಚ೦ದ್ರಮ್ಮ ಘಟನೆ ನಡೆದ ದಿನವೇ ಮೃತಪಟ್ಟಿದ್ದರೆ, ಮಾರನೆಯ ದಿನ ಮಗಳು ಧನು ಮೃತಳಾಗಿದ್ದಳು. ಅದಾಗಲೆ ತೀವ್ರ ಆಘಾತಕ್ಕೊಳಗಾಗಿದ್ದ ಜಗದೀಶ್ ಚಿಕ್ಕ ಮಗು ಗೌತಮ್ ಮೇ 6ರ೦ದು ಮೃತ ಪಟ್ಟಾಗ ಸಂಪೂರ್ಣ ಕುಸಿದು ಹೋಗಿದ್ದ.  ಮೇ 7 ರ೦ದು ಪುತ್ರನ ಅ೦ತ್ಯಕ್ರಿಯೆ ನೆರವೇರಿಸಿ ಬ೦ದ ಜಗದೀಶ್ ತಾನು ಕೂಡ ನೇಣು ಬಿಗಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿದ್ದಾನೆ.
 
ಮದ್ಯ ವ್ಯಸನದ ಪರಿಣಾಮ ಸಂಪೂರ್ಣ ಕುಟುಂಬ ಅಕಾಲಿಕ ಮರಣವನ್ನಪ್ಪಿದ್ದು ಮಾತ್ರ ವಿಪರ್ಯಾಸ.

ವೆಬ್ದುನಿಯಾವನ್ನು ಓದಿ