ಜಿಂದಾಲ್ ಸಾಲ ಮರುಪಾವತಿ ಮಾಡಬೇಕಿಲ್ಲ ಎಂದ ಕೆ.ಜೆ.ಜಾರ್ಜ್ ಗೆ ಹೆಚ್.ಕೆ.ಪಾಟೀಲ್ ಹೇಳಿದ್ದೇನು?

ಬುಧವಾರ, 5 ಜೂನ್ 2019 (12:16 IST)
ಬೆಂಗಳೂರು : ಜಿಂದಾಲ್ ಯಾವುದೇ ಸಾಲ ಮರುಪಾವತಿ ಮಾಡಬೇಕಿಲ್ಲ ಎಂದ ಕೆ.ಜೆ.ಜಾರ್ಜ್ ಗೆ ಟ್ವೀಟ್ ಮೂಲಕ ಹೆಚ್.ಕೆ.ಪಾಟೀಲ್ ಟಾಂಗ್ ನೀಡಿದ್ದಾರೆ.




ಜಿಂದಾಲ್ ಪರ ನಿಂತ ಕೆ.ಜೆ.ಜಾರ್ಜ್ ಗೆ ದಾಖಲೆಗಳ ಸಮೇತ ಟ್ವೀಟ್ ಮಾಡಿ ಜಿಂದಾಲ್ ಸಾಲ ಮರುಪಾವತಿ ಮಾಡಬೇಕಿದೆ ಎಂದು ಹೆಚ್.ಕೆ.ಪಾಟೀಲ್ ತಿರುಗೇಟು ನೀಡಿದ್ದಾರೆ.


ಈ ಕುರಿತು ಟ್ವೀಟ್ ಮಾಡಿದ ಹೆಚ್.ಕೆ.ಪಾಟೀಲ್, ಈ ಎಲ್ಲಾ ದಾಖಲೆಗಳನ್ನು ತಾವು ಒಮ್ಮೆ ಪರಿಶೀಲಿಸಿ. ಇದನ್ನು ನಾನು ಕಳುಹಿಸಿಕೊಡಬೇಕಾದ ಅಗತ್ಯವಿಲ್ಲ. ಈ ಎಲ್ಲಾ ದಾಖಲೆಗಳು ಸರ್ಕಾರದ ಕಡತಗಳಲ್ಲಿವೆ. ಆದರೂ ತಮ್ಮ  ಗಮನಕ್ಕೆ ಬರಲಿ ಎಂದು ಕಳುಹಿಸುತ್ತಿದ್ದೇನೆ ಎಂದು ಸಾಕ್ಷಿ ಸಮೇತ ಟಾಂಗ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ