ಪೌರತ್ವ ಕಾಯ್ದೆಗೆ ವಿರೋಧ ಯಾಕೆ? ಏನು? ಎತ್ತ?

ಬುಧವಾರ, 18 ಡಿಸೆಂಬರ್ 2019 (21:22 IST)
ಪೌರತ್ವ ಕಾಯ್ದೆಗೆ ವಿರೋಧ ಮಾಡಿ ಪ್ರತಿಭಟನೆ ಮಾಡುತ್ತಿರುವರಿಗೆ ಕಾನೂನು ಏನು? ಅನ್ನೋದೇ ಗೊತ್ತಿಲ್ಲ.

ಹೀಗಂತ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್,  ಲೆಫ್ಟ್ ಪಾರ್ಟಿಗಳು ಪೌರತ್ವ ಕಾಯ್ದೆ ತಿರುಚುವ ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆಕಾರರ ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ನಾಗರಿಕನ ಪೌರತ್ವ ಕಸಿದುಕೊಳ್ಳುವ ಕಾಯ್ದೆ ಇಲ್ಲ.

ಜಗತ್ತಿನ ನಾನಾ ದೇಶಗಳಿಂದ ಭಾರತಕ್ಕೆ ಬರ್ತಾರೆ ಅಂದ್ರೆ ಕಾಂಗ್ರೆಸ್ ಗೆ ಹೊಟ್ಟೆ ಉರಿ. ಅದಕ್ಕೆ ಕಾಂಗ್ರೆಸ್ ನವರು ಉತ್ತರ ನೀಡಬೇಕು ಎಂದಿದ್ದಾರೆ.

ಕಾಂಗ್ರೆಸ್ ನವರು ಹಿಂದು - ವಿರೋಧಿ ಹಾಗೂ ಸ್ವಾರ್ಥಕ್ಕಾಗಿ ಪೌರತ್ವ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ