ಯಡಿಯೂರಪ್ಪರನ್ನು ಬಿಜೆಪಿಯವರೇ ಇಳಿಸುತ್ತಾರಾ?

ಶನಿವಾರ, 15 ಆಗಸ್ಟ್ 2020 (23:19 IST)
ರಾಜ್ಯ ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ ಇದೆ. ವೈಮನಸ್ಸು ಪಕ್ಷದ ಮುಖಂಡರಲ್ಲಿದ್ದು ಅವರಲ್ಲೇ ಸಿಎಂ ರನ್ನು ಇಳಿಸಬೇಕೆಂದು ಯತ್ನಿಸುತ್ತಿದ್ದಾರೆ.
 

ಹೀಗಂತ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ಕೆ.ಪಾಟೀಲ್ ದೂರಿದ್ದಾರೆ.

ಅಧಿಕಾರಕ್ಕೊಸ್ಕರವೇ ಬಿಜೆಪಿಯವರು ಹಂಬಲಿಸುತ್ತಿದ್ದು, ಅವರಿಗೆ ಮತ್ತೇನೂ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.

ಇನ್ನು, ಬೆಂಗಳೂರು ಗಲಭೆ ಕೇಸ್ ನಲ್ಲಿ ಕಾಂಗ್ರೆಸ್ ಶಾಸಕರ ಮನೆಗೆ ಹಾನಿಯಾಗಿದೆ. ಆದರೆ ಕಾಂಗ್ರೆಸ್ ನವರ ಕೈವಾಡವಿದೆ ಅನ್ನೋ ಬಿಜೆಪಿಯವರ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ