ಬಟ್ಟೆ ತೊಳೆಯಲು ಹೋಗಿ ಮಹಿಳೆಯರಿಬ್ಬರು ನೀರು ಪಾಲು

ಶನಿವಾರ, 16 ಅಕ್ಟೋಬರ್ 2021 (21:31 IST)
ಬಟ್ಟೆ ತೊಳೆಯಲು ಹೋಗಿ ಮಹಿಳೆಯರಿಬ್ಬರು ನೀರು ಪಾಲಾದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದಲ್ಲಿ ನಡೆದಿದೆ. ಒಂದೇ ಕುಟುಂಬದ ಲಲಿತಾ ಕತ್ತಿ, ಅನುಪಮಾ ದೊಡ್ಡಮನಿ, ಮೃತ ದುರ್ದೈವಿಗಳಾಗಿದ್ದಾರೆ. ಬಟ್ಟೆ ತೊಳೆಯಲು ಇಡೀ ಕುಟುಂಬ ಗಂಜಿಕೆರೆಗೆ ಹೊರಟ್ಟಿದ್ದರು, ಬಟ್ಟೆ ತೊಳೆಯುತ್ತಿದ್ದಾಗ ವಿನಾಯಕ ಎಂಬ ಬಾಲಕ ನೀರು ಪಾಲಾಗಿದ್ದಾನೆ. ಈ ವೇಳೆ ಬಾಲಕ ರಕ್ಷಣೆಗೆ ಅತ್ತೆ ಲಲಿತಾ ಕತ್ತಿ, ಅಕ್ಕ ಅನುಪಮಾ ನೀರಿಗೆ ಜೀಗಿದಿದ್ದಾನೆ. ನಂತ್ರ ಮೂವರ ರಕ್ಷಣೆಗೆ ಇಬ್ಬರು ಗಂಡಸರು, ಮೂವರು ಮಹಿಳೆಯರು ಜೀಗಿದಿದ್ದಾರೆ. ನೀರಿನಲ್ಲಿ ಕೂಗಾಡುತ್ತಿದ್ದಾಗ ಅಲ್ಲಿದ್ದ ಕುರಿಗಾಹಿಗಳು, ಮೀನುಗಾರರು ಓಡಿ ಬಂದು ಐವರನ್ನ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದವರನ್ನು ಗುಳೇದಗುಡ್ಡ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ