ಕಾವೇರಿ ಹೋರಾಟ: ಕೆಆರ್‌ಎಸ್ ನೀರಿಗಿಳಿದು ಪ್ರತಿಭಟಿಸಿದ ಮಹಿಳೆಯರು

ಗುರುವಾರ, 8 ಸೆಪ್ಟಂಬರ್ 2016 (13:32 IST)
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರವೇ ಕಾರ್ಯಕರ್ತರು  ಕೆಆರ್‌ಎಸ್ ಡ್ಯಾಂ ಬಳಿ ನೀರಿಗಿಳಿದು ಪ್ರತಿಭಟನೆ ನಡೆಸಿದರು.

ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತರು ಯಾತಕ್ಕಾಗಿ ಹೋರಾಟ, ನೀರಿಗಾಗಿ ಹೋರಾಟ, ನಮ್ಮದು ನಮ್ಮದು ಕಾವೇರಿ ನಮ್ಮದು, ಎಲ್ಲಿವರೆಗೆ ಹೋರಾಟ, ಗೆಲ್ಲುವವರೆಗೆ ಹೋರಾಟ ಮುಂತಾದ ಘೋಷಣೆಗಳನ್ನು ಮಹಿಳೆಯರೂ ಸೇರಿದ್ದ ಕರವೇ ಕಾರ್ಯಕರ್ತರು ಕೂಗಿದರು.

ಇದಾದ ಬಳಿಕ ಮಹಿಳೆಯರೂ ಕೆಆರ್‌ಎಸ್ ಡ್ಯಾಂ ನೀರಿಗಿಳಿದು ಪ್ರತಿಭಟನೆ ನಡೆಸಿದರು. ಈ ನಡುವೆ ವಾಟಾಳ್ ನಾಗರಾಜ್ ರಸ್ತೆಯಲ್ಲೇ ಉರುಳುಸೇವೆ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು. ಬಟ್ಟೆಕೊಳೆಯಾಗದಂತೆ ಜಮಖಾನ ಹಾಕಿಕೊಂಡು ವಾಟಾಳ್ ಪ್ರತಿಭಟನೆ ಮಾಡಿದ್ದು ವಿಶೇಷವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ