ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೆಂಬಲಿಸಿದ್ದರಾ ಬಿಎಸ್`ವೈ..? ಈಗ ವಿರೋಧಿಸುತ್ತಿರುವುದೇಕೆ..?

ಶನಿವಾರ, 29 ಜುಲೈ 2017 (12:55 IST)
ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮವಾಗುವುದು ಬೇಡ ಎಂದು ವಿರೋಧಿಸುತ್ತಿರುವ ಯಡಿಯೂರಪ್ಪನವರಿಗೇ ಅವರ ಅಭಿಪ್ರಾಯ ತಿರುಗುಬಾಣವಾಗುವ ಸಾಧ್ಯತೆ ಇದೆ.

2013ರಲ್ಲೇ ಲಿಂಗಾಯತ ಮಹಾಸಭಾ ಪ್ರತ್ಯೇಕ ಧರ್ಮ ಸ್ಥಾಪನೆಗೆ ಮುಂದಾಗಿತ್ತು. ಅಂದು ಮಹಾಸಭಾ ಪ್ರಧಾನಿ ಮನಮೋಹನ್ ಸಿಂಗ್`ಗೆ ಸಲ್ಲಿಸಿದ್ದ ಸಲ್ಲಿಸಿದ್ದ ಮನವಿಗೆ 20ಕ್ಕೂ ಅಧಿಕ ಬಿಜೆಪಿ ಶಾಸಕರು ಸಹಿ ಹಾಕಿ ಹಾಕಿದ್ದರು. ಇದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಸಹ ಸಹಿ ಹಾಕಿದ್ದರು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ..

ಎಲ್ಲರು ಒಗ್ಗಟ್ಟಾಗಿ ಬಂದರೆ ಲಿಂಗಾಯತ ಸ್ವತಂತ್ರ ಧರ್ಮ ರಚನೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದೇನೆ. ಸ್ವತಂತ್ರ ಧರ್ಮ ಸ್ಥಾಪನೆಗೆ ಕಾನೂನಿನ ಅಭಿಪ್ರಾಯ ಇನ್ನೂ ಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ