ಮೀಸಲಾತಿ ಘೋಷಣೆಗೆ ಡೆಡ್ಲೈನ್ ನೀಡಿದ ಯತ್ನಾಳ್

ಶುಕ್ರವಾರ, 6 ಜನವರಿ 2023 (09:04 IST)
ಬೆಳಗಾವಿ : ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಕೊಡ್ತಿರೋ ಇಲ್ವೋ ಅನೋದನ್ನ ಸಿಎಂ ಬೊಮ್ಮಾಯಿ ಅವರು ತಾಯಿ ಆಣೆ ಮಾಡಿ ಹೇಳಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪಟ್ಟು ಹಿಡಿದಿದ್ದಾರೆ.

ನಗರದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ತಾಯಿ ಆಣೆ ಮಾಡಿ, ತಾಯಿಯ ಮೇಲೆ ಗೌರವ ಇದ್ದರೆ, 24 ತಾಸಿನಲ್ಲಿ ಆಣೆ ಮಾಡಿ ಹೇಳಿ ಎಂದು ಒತ್ತಾಯಿಸಿದ್ದಾರೆ. 

ನಾವು ಧಮ್ಕಿ ಹಾಕಿ ಮೀಸಲಾತಿ ಕೇಳ್ತಿಲ್ಲ. ಧಮ್ಕಿ ಹಾಕಿದ್ದರೆ ಸುವರ್ಣ ಸೌಧಕ್ಕೇ ಮುತ್ತಿಗೆ ಹಾಕುತ್ತಿದ್ವಿ. ನಿಮ್ಮನ್ನ ಮೂತ್ರ ವಿಸರ್ಜನೆಗೂ ಬಿಡುತ್ತಿರಲಿಲ್ಲ. ಏನೂ ಮಾಡದೇ ಧಮ್ಕಿ ಅಂತಾ ಅಪವಾದ ಕೊಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ