ವಿಧಾನ ಮಂಡಲ ಅಧಿವೇಶನ ನಡಯೋದೇ ಇಲ್ಲ ಎಂದ ಯಡಿಯೂರಪ್ಪ

ಬುಧವಾರ, 10 ಜುಲೈ 2019 (18:45 IST)
ಮೈತ್ರಿ ಸರಕಾರದ ಶಾಸಕರು ರಾಜೀನಾಮೆ ನೀಡಿರೋ ಹಿನ್ನೆಲೆಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯೋ ಪ್ರಶ್ನೆಯೇ ಇಲ್ಲ ಅಂತ ಯಡಿಯೂರಪ್ಪ ಹೇಳಿದ್ದಾರೆ.

ಜೆಡಿಎಸ್ – ಕಾಂಗ್ರೆಸ್ ನ 14 ಹಾಗೂ ಪಕ್ಷೇತರ 2 ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹದಿನಾರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಬೇಕು ಎಂದು ಒತ್ತಾಯಿಸಿದ್ರು.

ವಿಧಾನ ಮಂಡಲ ಅಧಿವೇಶನ ನಡೆಯೋ ಪ್ರಶ್ನೆ ಇಲ್ಲ. ಮೈತ್ರಿ ಸರಕಾರಕ್ಕೆ ಬಹುಮತ ಇಲ್ಲ. ಈ ಕುರಿತು ಕೇಂದ್ರ ಗೃಹ ಸಚಿವರಿಗೆ ಎಲ್ಲಾ ಮಾಹಿತಿ ನೀಡಿರುವೆ ಎಂದ್ರು.

ಇನ್ನು, ಸ್ಪೀಕರ್ ಅವರು ಶಾಸಕರ ರಾಜೀನಾಮೆ ಕುರಿತು ನಿರ್ಧಾರ ಮಾಡೋ ವಿಷಯದಲ್ಲಿ ಯಾವುದೇ ಕಾರಣಕ್ಕೂ ತಡ ಮಾಡಬಾರದು. ಸುಪ್ರೀಂ ಕೋರ್ಟ್ ಆದೇಶ ಬರೋವರೆಗೂ ಕಾಯಬಾರದು ಅಂತ ಯಡಿಯೂರಪ್ಪ ಆಗ್ರಹ ಮಾಡಿದ್ರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ