ಹಣಬಲ, ಜಾತಿಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವುದು ಕಾಂಗ್ರೆಸ್ ಭ್ರಮೆ: ಯಡಿಯೂರಪ್ಪ

ಶುಕ್ರವಾರ, 17 ಮಾರ್ಚ್ 2017 (15:59 IST)
ಉಪ ಚುನಾವಣೆಯಲ್ಲಿ ಹಣಬಲ, ಜಾತಿಬಲದಿಂದ ಗೆಲ್ಲುತ್ತೇವೆ ಎನ್ನುವುದು ಕಾಂಗ್ರೆಸ್ ಭ್ರಮೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಸರಕಾರದ ವೈಫಲ್ಯವನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ರಾಜ್ಯ ಸರಕಾರದ ಬ್ರಹ್ಮಾಂಡ್ ಭ್ರಷ್ಟಾಚಾರವನ್ನು ಜನತೆಯ ಮುಂದಿಡುತ್ತೇವೆ. ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸುವುದು ಖಚಿತ. ಯಾವುದೇ ಅನುಮಾನ ಬೇಡ ಎಂದರು.
 
ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಸಚಿವರು, ಶಾಸಕರನ್ನು ನಂಜನಗೂಡು, ಗುಂಡ್ಲುಪೇಟೆಗೆ ಕಳುಹಿಸಿದ್ರೆ ನಮಗೆ ಲಾಭ. ಅವರ ಉಪಸ್ಥಿತಿಯಲ್ಲಿಯೇ ನಾವು ಗೆದ್ದು ತೋರಿಸುತ್ತೇವೆ ಎಂದು ಸವಾಲ್ ಹಾಕಿದರು.
 
ರಾಜ್ಯಸರಕಾರ ನಂಜನಗೂಡಿಗೆ 500 ಕೋಟಿ ಅನುದಾನ ನೀಡಿದೆ. ಗುಂಡ್ಲುಪೇಟೆಗೆ ಅನುದಾನ ನೀಡಿಲ್ಲ. ಇದು ನೋಡಿದರೆ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ