ಬೆಳ್ಳಂ ಬೆಳಿಗ್ಗೇ ಯುವಕನ ಕೊಚ್ಚಿ ಕೊಲೆ

ಗುರುವಾರ, 4 ನವೆಂಬರ್ 2021 (09:50 IST)
ಕುಲಬರಗಿ: ಬೆಳ್ಳಂ ಬೆಳಿಗ್ಗೆಯೇ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕುಲಬರಗಿಯಲ್ಲಿ ನಡೆದಿದೆ.

25 ವರ್ಷದ ಅಭಿಷೇಕ್ ಕೊಲೆಗೀಡಾದಾತ. ಈ ಕೊಲೆ ಹಿಂದಿನ ಕಾರಣವೇನೆಂದು ಇದುವರೆಗೆ ಪತ್ತೆಯಾಗಿಲ್ಲ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆಗೀಡಾದ ಯುವಕ ಕುಲಬರಗಿ ನಗರದ ವಿದ್ಯಾನಗರ ನಿವಾಸಿ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ