ಸೆಂಟ್ರಲ್ ನಲ್ಲಿ ಸುಮಲತಾ ಪರ ಕೂಗಿದ ಕೈ ಕಾರ್ಯಕರ್ತ

ಸೋಮವಾರ, 8 ಏಪ್ರಿಲ್ 2019 (18:25 IST)
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಮಾಜಿ ಸಿಎಂ‌ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿರುವಾಗ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕಾರ್ಯಕರ್ತನೊಬ್ಬ ಕೂಗಿದ ಘಟನೆ ನಡೆದಿದೆ.

ರಾಜಾಜಿನಗರದ ಮೋದಿ ಹಾಸ್ಪಿಟಲ್ ಬಳಿ ಸಿದ್ದರಾಮಯ್ಯ ಪ್ರಚಾರ ನಡೆಸಿದ್ರು. ಸಚಿವ ಕೆಜೆ ಜಾರ್ಜ್, ಝಮಿರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್ ಪ್ರಚಾರದಲ್ಲಿ ಭಾಗಿಯಾಗಿದ್ದರು. ರಾಜಾಜಿನಗರ ಮೋದಿ ಹಾಸ್ಪಿಟಲ್ ಬಳಿ ಸಿದ್ದರಾಮಯ್ಯ ಬಹಿರಂಗ ರ್ಯಾಲಿ ನಡೆಸಿದ್ರು. ರಿಜ್ವಾನ್ ಗೆ ಮತ ನೀಡುವಂತೆ ಸಿದ್ದರಾಮಯ್ಯ ಪ್ರಚಾರ ಶುರುಮಾಡಿದ್ರು.

ರೋಡ್ ಶೋ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸಂಸತ್ ನಲ್ಲಿ ಒಂದಿನ ಮಾತಾಡಿಲ್ಲ. ಹತ್ತು ವರ್ಷದಲ್ಲಿ ಒಂದೇ ಒಂದು ಬಾರಿ ಮಾತನಾಡಿಲ್ಲ. ಮೋದಿ ಮುಖಃ ನೋಡಿ ನನಗೆ ಮತ ಹಾಕಿ ಅನ್ತಾರೆ ಎಂದು ಟೀಕೆ ಮಾಡಿದ್ರು.

ಬೆಂಗಳೂರಿನ ಪ್ರಚಾರದಲ್ಲೂ ಸುಮಲತಾ ಅಂಬರೀಶ್ ಪರ ಕೂಗು ಕೇಳಿಬಂದಿತು. ಸುಮಲತಾ ಗೆಲ್ಲಿಸುವಂತೆ ಧ್ವನಿ ಎತ್ತಿದ ಕಾಂಗ್ರೆಸ್ ಕಾರ್ಯಕರ್ತನೊಬ್ಬ, ಇಲ್ಲಿ ರಿಜ್ವಾನ್ ಅರ್ಷದ್ ಗೆಲ್ಲಿಸುತ್ತೇವೆ. ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಿಕೊಡಿ ಅಣ್ಣ ಎಂದ ಕಾರ್ಯಕರ್ತ ಮನವಿ ಮಾಡಿದ.

ಆದರೆ ಈ ವೇಳೆ ಆ ಕಾರ್ಯಕರ್ತನ ಕೂಗಿಗೆ ಕಿವಿ ಕೊಡದೆ ತನ್ನ ಭಾಷಣ ಮುಂದು ವರೆಸಿದ ಸಿದ್ದರಾಮಯ್ಯ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ